• Slide
    Slide
    Slide
    previous arrow
    next arrow
  • ರಸ್ತೆಯಂಚಿನ ಧರೆಯಲ್ಲಿ ಕಾಣಿಸಿಕೊಂಡ ಬಿರುಕು; ಆತಂಕದಲ್ಲಿ ಸ್ಥಳೀಯರು

    300x250 AD

    ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ವ್ಯಾಪ್ತಿಯ ಬೀಗಾರ ಮುಖ್ಯ ರಸ್ತೆಯಂಚಿನ ಶಿವಗುರೂಜಿ ಮನೆ ಮೇಲ್ಭಾಗದ ಬಳಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಕಳೆದ ಹದಿನೈದು ದಿನಗಳಿಂದ ನಿರಂತರ ಮಳೆಯಿಂದ ಈಗ ಅವಘಡ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ರಸ್ತೆ ಕುಸಿದು ಸಂಚಾರ ಸಂಪರ್ಕ ಕಳೆದುಕೊಂಡಿತ್ತು. ಬದಲಿ ಮಾರ್ಗವಾಗಿ ಈ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮೂರು ನಿರ್ಮಾಣ ಮಾಡಿ ಬಳಕೆಗೆ ಲೋಕೋಪಯೋಗಿ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು.

    ಮತ್ತೆ ಈಗ ಅದೇ ಸ್ಥಳದಲ್ಲಿ ರಸ್ತೆ ಕುಸಿಯುವ ಅಪಾಯದೊಂದಿಗೆ ಸ್ಥಳೀಯ ನಿವಾಸಿಗಳಿಗೆ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ತಾಲೂಕಿನ ವಜ್ರಳ್ಳಿಯ ಪಂಚಾಯಿತ ವ್ಯಾಪ್ತಿಯ ಹೊನ್ನಗದ್ದೆ ಗ್ರಾಮದ ಗಿಡಗಾರಿ ಬಳಿ ರಸ್ತೆ ಪಕ್ಕದ ಗುಡ್ಡ ಕುಸಿತವಾಗುವ ಮೂಲಕ ಸ್ಥಳೀಯ ನಿವಾಸಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top