Slide
Slide
Slide
previous arrow
next arrow

ಹಳ್ಳ ತುಂಬಿ ಹರಿದು ಆಕಳು ಸಾವು

300x250 AD

ಮುಂಡಗೋಡ: ತಾಲೂಕಿನ ಶಿಡ್ಲಗುಂಡಿ ಹಳ್ಳ ತುಂಬಿ ಹರಿದ ಕಾರಣಕ್ಕೆ ಆಕಳು ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಶಿಡ್ಲಗುಂಡಿ ಗ್ರಾಮದ ಹಳ್ಳದ ದಡದಲ್ಲಿ ಆಕಳು ಮೃತಪಟ್ಟಿದ್ದು, ಈ ಆಕಳು ಜಾನಾಬಾಯಿ ಶಿಂಧೆ ಎಂಬುವವರದಾಗಿದೆ. ಆಕಳು ಮೃತಪಟ್ಟ ವಿಷಯ ಕೇಳಿ ಕಂದಾಯ ಗ್ರಾಮ ಲೆಕ್ಕಾಧಿಕಾರಿ ಗೋಣಿ ಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹುಬ್ಬಳ್ಳಿ- ಧಾರವಾಡ ಮಳೆಯಾದರೆ ಹಳ್ಳ ತುಂಬಿ ಬಂದು ಪ್ರತಿ ವರ್ಷವು ಒಂದಲ್ಲಾ ಒಂದು ಇಂತಹ ಘಟನೆ ನಡೆಯುತ್ತಲೇ ಇದೆ. ಗೌಳಿ ಜನಾಂಗದ ದನಗಳು ಮೇಯಲು ಹೋಗುವ ಸಂದರ್ಭದಲ್ಲಿ ಆಕಳು ಹಳ್ಳದಲ್ಲಿ ಸಿಲುಕಿ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.

300x250 AD
Share This
300x250 AD
300x250 AD
300x250 AD
Back to top