Slide
Slide
Slide
previous arrow
next arrow

ಅಪ್ರಾಪ್ತ ಹಿಂದೂ ಬಾಲಕಿಯರ ಸಾಮೂಹಿಕ ಅತ್ಯಾಚಾರ: ಆರೋಪಿ ಜುಬೈರ್ ಅಹ್ಮದ್ ತಾಲೂಕ್ದಾರ್ ಬಂಧನ

300x250 AD

ಅಸ್ಸಾಂ: ಅಪ್ರಾಪ್ತ ಹಿಂದೂ ಬಾಲಕಿಯರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಜುಬೈರ್ ಅಹ್ಮದ್ ತಾಲೂಕ್ದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 18 ರ ರಾತ್ರಿ, ಹೈಲಕಂಡಿ ಪೊಲೀಸರು ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಜುಬೈರ್ ಅಹ್ಮದ್ ತಾಲೂಕ್ದಾರ್ ನನ್ನು ಬಂಧಿಸಿದರು.

ಮೂಲಗಳ ಪ್ರಕಾರ, ಹಿಂದಿನ ರಾತ್ರಿ ದಾಳಿಯ ಸಮಯದಲ್ಲಿ ಕರೀಮ್‌ಗಂಜ್ ಜಿಲ್ಲೆಯ ದೋಹಲಿಯಾ ಪ್ರದೇಶದಿಂದ ಜುಬೈರ್‌ನನ್ನು ಬಂಧಿಸಲಾಯಿತು. ಜುಲೈ 4 ರಂದು ಹೈಲಕಂಡಿ ಜಿಲ್ಲೆಯ ಬರ್ನೀ ಸೇತುವೆಯಲ್ಲಿ ಅಪ್ರಾಪ್ತ ಬಾಲಕಿಯರ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಘೋರ ಘಟನೆಯಿಂದ ಅವರು ತಲೆಮರೆಸಿಕೊಂಡಿದ್ದಾರೆ.
ಆ ದಿನ ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರು ಶಾಲೆಯಿಂದ ಹಿಂತಿರುಗುತ್ತಿದ್ದರು. ಕೆಲವು ಮುಸ್ಲಿಂ ಯುವಕರು ಅವರನ್ನು ರೋಸ್ಕಂಡಿ ಚಹಾ ತೋಟದ ಪಕ್ಕದಲ್ಲಿರುವ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ರೂರ ಅತ್ಯಾಚಾರ ಮತ್ತು ಚಿತ್ರಹಿಂಸೆ ನಂತರ, ದುಷ್ಕರ್ಮಿಗಳು ಅವರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಕೆಲವು ಗಂಟೆಗಳ ನಂತರ, ಆ ಚಹಾ ತೋಟದ ಕಾರ್ಮಿಕರು ಅವರನ್ನು ಕಂಡು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಕರ್ತವ್ಯ ನಿರತ ವೈದ್ಯರು ಅವರನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಓರ್ವ ಅಪ್ರಾಪ್ತ ಬಾಲಕಿ(14) ಮೃತಪಟ್ಟಿದ್ದಾಳೆ.

ಈ ಘೋರ ಅಪರಾಧದ ನಂತರ, ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ತಕ್ಷಣವೇ ಜಬೀರ್ ಅಹ್ಮದ್ ಬರ್ಭುಯಾ ಮತ್ತು ಅನ್ಸಾರ್ ಉದ್ದೀನ್ ಮಜುಂದಾರ್ ಅನ್ನು ಬಂಧಿಸಿದರು. ಆದರೆ ಪ್ರಮುಖ ಆರೋಪಿ ಜುಬೈರ್ ಅಹಮದ್ ತಾಲೂಕ್ದಾರ್ ತಲೆಮರೆಸಿಕೊಂಡಿದ್ದಾನೆ. ಹೈಲಕಂಡಿ ಪೊಲೀಸರು ಆತನನ್ನು ಮೋಸ್ಟ್ ವಾಂಟೆಡ್ ಎಂದು ಘೋಷಿಸಿದರು ಮತ್ತು ಅವನ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯಲು ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅವನ ವಿವರಗಳನ್ನು ಪೋಸ್ಟ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಆತನನ್ನು ಬಂಧಿಸಿದರು.

300x250 AD

ಆದಾಗ್ಯೂ, ಈ ಬಂಧನದಿಂದ ಸ್ಥಳೀಯರು ಸಂತೋಷವಾಗಿಲ್ಲ. ಅವರು ಎನ್‌ಕೌಂಟರ್‌ಗೆ ಒತ್ತಾಯಿಸಿದ್ದಾರೆ.

ಕೃಪೆ: http://hinduvoice.in

Share This
300x250 AD
300x250 AD
300x250 AD
Back to top