Slide
Slide
Slide
previous arrow
next arrow

ಸೋರುತ್ತಿರುವ ಅಂಗನವಾಡಿ ಕಟ್ಟಡ; ಪಾಲಕರಿಗೆ ಆತಂಕ

300x250 AD

ಜೊಯಿಡಾ: ತಾಲೂಕಿನ ಮೊದಲ ಸ್ಮಾರ್ಟ್ ಅಂಗನವಾಡಿ ಎಂದು ಹೆಗ್ಗಳಿಕೆಗೆ ಪಾತ್ರವಾದ ರಾಮನಗರದ ಹನುಮಾನಗಲ್ಲಿ ಅಂಗನವಾಡಿ ಮಳೆಗೆ ಸೋರುತ್ತಿರುವುದು ಮಕ್ಕಳ ಪಾಲಕರಲ್ಲಿ ಆತಂಕ ಹುಟ್ಟಿಸಿದೆ.

ಮಕ್ಕಳಿಗೆ ಸ್ಮಾರ್ಟ್ ಪ್ರಿಸ್ಕೂಲ್ ಶಿಕ್ಷಣ ನೀಡುವ ಉದ್ದೇಶದಿಂದ ಜಿಪಂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೂಲಕ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ 18 ಲಕ್ಷದಲ್ಲಿ ನಿರ್ಮಿಸಿದ ಈ ಅಂಗನವಾಡಿ ಕಟ್ಟಡವನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದ್ದರು. ಕೇವಲ ಒಂದು ಮಳೆಗಾಲ ಮಾತ್ರ ಕಳೆದಿದೆ ಅಷ್ಟೇ, ಈ ವರ್ಷ ಅಂಗನವಾಡಿ ತುಂಬಾ ಸೋರುತ್ತಿದ್ದೂ, ಜಿಲ್ಲಾ ನಿರ್ಮಿತಿ ಕೇಂದ್ರದ ಕಾಮಗಾರಿ ಬಗ್ಗೆ ಜನರು ಬೇಸರ ವ್ಯಕ್ತ ಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top