• Slide
    Slide
    Slide
    previous arrow
    next arrow
  • ಜು.29ಕ್ಕೆ ಜರ್ನಲಿಸ್ಟ್ ಯುನಿಯನ್ ಪತ್ರಿಕಾ ದಿನಾಚರಣೆ

    300x250 AD

    ಯಲ್ಲಾಪುರ : ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಯಲ್ಲಾಪುರ(ಕೆಜೆಯು) ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ಸಭಾಭವನದಲ್ಲಿ ಜು. 29ರಂದು ಬೆಳಿಗ್ಗೆ 10. 30ಕ್ಕೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

    ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ವಿಸ್ತಾರ ನ್ಯೂಸ್ ಮಿಡಿಯಾ ಸಿಇಓ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ ಕೋಣೆಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಜಯವಾಣಿ ದೈನಿಕದ ಸುದ್ದಿ ಸಂಪಾದಕರು ಮತ್ತು ವಿಶ್ವದರ್ಶನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನಿಯೋಜಿತ ಪ್ರಾಂಶುಪಾಲರಾದ ನಾಗರಾಜ ಇಳೇಗುಂಡಿ ಪತ್ರಿಕೋದ್ಯಮದಲ್ಲಿ ಇಂದಿನ ಸವಾಲುಗಳು ಈ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಯಲ್ಲಾಪುರ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಶಂಕರ ಭಟ್ ತಾರೀಮಕ್ಕಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಕೆಜೆಯು ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top