• Slide
    Slide
    Slide
    previous arrow
    next arrow
  • ಬೈಕ್ ಢಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಪಾದಾಚಾರಿ ಸಾವು

    300x250 AD

    ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
    ಮೃತ ವ್ಯಕ್ತಿಯ ಅಪರಿಚಿತನಾಗಿದ್ದು, ಸುಮಾರು 35ರಿಂದ 40 ವರ್ಷ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಈತನ ಬಲಗೈ ಈ ಮೊದಲೇ ಸಂಪೂರ್ಣವಾಗಿ ತುಂಡಾಗಿದೆ. ಈತ ಮುರುಡೇಶ್ವರ ರೈಲ್ವೇ ಸಮೀಪದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಹೊನ್ನಾವರ ಕಡೆಯಿಂದ ಮುರುಡೇಶ್ವರ ಕಡೆಗೆ ಅತಿ ವೇಗ ಹಾಗೂ ಅಜಾಗರುಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ಬೈಕ್ ಸವಾರ ಢಿಕ್ಕಿ ಹೊಡೆದಿದ್ದಾನೆ.
    ಅಪಘಾತದಲ್ಲಿ ಪಾದಾಚಾರಿ ತಲೆಗೆ ತೀವ್ರವಾಗಿ ಗಾಯಗಳಾಗಿದ್ದು, ತಕ್ಷಣ ಅಲ್ಲೇ ಸಮೀಪವಿದ್ದ ಆರ್.ಎನ್.ಎಸ್ ಆಸ್ಪತ್ರೆಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪಿದ್ದಾನೆ. ಬೈಕ್ ಸವಾರ ಕ್ಲಿಟಸ್ ಅಗ್ನೆಲ್ ಡಿಸೋಜಾ ತಲೆಗೆ ಗಾಯಗಳಾಗಿದೆ. ಈ ಕುರಿತು ಬೈಕ್ ಸವಾರನ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top