• Slide
    Slide
    Slide
    previous arrow
    next arrow
  • ಹಲ್ಲೆ ನಡೆಸಿ ಹಣ,ಮೊಬೈಲ್ ದೋಚಿದ್ದ ಆರೋಪಿಯ ಬಂಧನ

    300x250 AD

    ಕುಮಟಾ: ಹೋಟೆಲ್ ಕಾರ್ಮಿಕನೋರ್ವನ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾದ ಆರೋಪಿಯನ್ನು ಕೇವಲ 24 ಗಂಟೆಯೊಳಗಾಗಿ ಪೊಲೀಸರು ಬಂಧಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ. ಕುಮಟಾದ ಹೊಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಮಟಾದ ಹೆಗಡೆಯ ಕೃಷ್ಣ ಶೆಟ್ಟಿ ಎನ್ನುವವರು ನಿತ್ಯದ ತಮ್ಮ ಕೆಲಸ ಮುಗಿಸಿ ಹೊಟೆಲ್‌ನಲ್ಲಿ ಮಲಗಿದ್ದ ವೇಳೆ ಹಣ ಹಾಗೂ ಮೊಬೈಲ್‌ನ ಆಸೆಗೆ ಸೋಡಾ ಬಾಟಲಿಯಿಂದ ಕೃಷ್ಣ ಶೆಟ್ಟಿ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ.

    ಆರೋಪಿಯು ತೀರ್ಥಹಳ್ಳಿಯ ಸುಬ್ರಹ್ಮಣ್ಯ ಎಂದು ತಿಳಿದು ಬಂದಿದ್ದು, ಈತನು ಸಹ ಕಳೆದ 4 ದಿನಗಳ ಹಿಂದಷ್ಟೆ ಅದೇ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಮೊಬೈಲ್ ಹಾಗೂ ಹಣದ ಮೇಲೆ ಗುರಿ ಇಟ್ಟಿದ್ದ ಆರೋಪಿ,ಕೃಷ್ಣ ಶೆಟ್ಟಿ ಮಲಗಿದ್ದ ವೇಳೆ ಮೊಬೈಲ್ ಹಾಗೂ ಹಣ ದೋಚಿ ಕಣ್ಮರೆಯಾಗಿದ್ದ.

    300x250 AD

    ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೀಘ್ರವೇ ತನಿಖೆ ಕಾರ್ಯ ಚುರುಕುಗೊಳಿಸಿ ಕುಂದಾಪುರದಲ್ಲಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top