Slide
Slide
Slide
previous arrow
next arrow

ಚತುರ್ವೇದ ಸಂಹಿತಾ ಯಜ್ಞ ಸಂಪನ್ನ: ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ

300x250 AD

ಗೋಕರ್ಣ : ಇಲ್ಲಿಯ ವೇದ ವಿದ್ಯಾ ಪರಿಷತ್ ಹಾಗೂ ರಾಮಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ವತಿಯಿಂದ ಏಳು ದಿನಗಳವರೆಗೆ ನಡೆದ ಚತುರ್ವೇದ ಸಂಹಿತಾ ಸ್ವಾಹಾಕಾರ ಮಹಾಯಜ್ಞ ಸಂಪನ್ನಗೊಂಡಿತು.

ಶ್ರೀ ರಾಮಚಂದ್ರ ಸೀತಾ ಮತ್ತು ಪರಿವಾರ ದೇವರಿಗೆ ಪೂಜೆ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಇದೇ ಮೊದಲ ಬಾರಿ ನಡೆದ ಯಾಗದಲ್ಲಿ ದಕ್ಷಿಣ ಕಾಶಿಯೆಂದೇ ಖ್ಯಾತಿಯಾಗಿರುವ ಮಹಾಬಲೇಶ್ವರ ದೇವಾಲಯದ ಪ್ರಧಾನ ಅರ್ಚಕ ಅಮೃತೇಶ ಹಿರೇ ನೇತೃತ್ವ ವಹಿಸಿದ್ದರು. ಯಜ್ಞಪತಿ ಭಟ್, ಶಿವಭಟ್, ನಾಗಾನಂದ ಮಾರಿಗೋಳಿ, ನಾಗರಾಜ ಗಾಯತ್ರಿ, ಗಣಪತಿ ಉಪಾಧ್ಯ, ವಿಶ್ವೇಶ್ವರ ಜೋಶಿ, ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಕಾರ್ಯದರ್ಶಿ ಚಂಪತ್ ರಾಯ್‌ಜಿ ಟ್ರಸ್ಟಿನ ಗೋಪಾಲ ಜೀ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top