• Slide
    Slide
    Slide
    previous arrow
    next arrow
  • ಜು.14,15ಕ್ಕೆ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ‘ತರಕಾರಿ ಬೀಜ ಮೇಳ’

    300x250 AD

    ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯವರ ಸಹಯೋಗದಲ್ಲಿ  ಜು.14 ಮತ್ತು 15 ರಂದು ಸಾಂಪ್ರದಾಯಿಕ ತರಕಾರಿ ಬೀಜ ಮೇಳವನ್ನು ಇಲ್ಲಿನ ಎಪಿಎಂಸಿ ಯಾರ್ಡಿನ ಪಿಎಲ್ ಡಿ ಬ್ಯಾಂಕ್ ಕಟ್ಟಡದ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ  ಬೆಳಿಗ್ಗೆ 10.30 ರಿಂದ ಸಂಜೆ 6 ಗಂಟೆಯವರೆಗೆ ಆಯೋಜಿಸಲಾಗಿದೆ.

    ರೈತರು ಹಾಗೂ ರೈತ ಮಹಿಳೆಯರು ತಮ್ಮಲ್ಲಿರುವ  ಗುಣಮಟ್ಟದ ಸಾಂಪ್ರದಾಯಿಕ ತರಕಾರಿ ಬೀಜ/ ತರಕಾರಿ ಸಸಿಗಳನ್ನು ಮುಂಚಿತವಾಗಿ ಹೆಸರು ನೊಂದಾಯಿಸಿಕೊಂಡು ತರಕಾರಿ ಬೀಜ ಮೇಳದಲ್ಲಿ ಮಾರಾಟ ಮಾಡಬಹುದಾಗಿದ್ದು, ಕೈತೋಟದಲ್ಲಿ ಅಭಿವೃದ್ಧಿಪಡಿಸಿದ ಸಾಂಪ್ರದಾಯಿಕ ತರಕಾರಿ ಬೀಜಗಳು,ವಿವಿಧ ತಳಿಯ ಹೂವಿನ ಗಿಡಗಳು/ ಸಸಿಗಳು, ವಿವಿಧ ಗೃಹ ಉತ್ಪನ್ನಗಳು ಮೇಳದ ವಿಶೇಷತೆಗಳಾಗಿವೆ..

    300x250 AD

    ರಾಸಾಯನಿಕ ಉಪಯೋಗಿಸಿದ ತರಕಾರಿ ಬೀಜಗಳನ್ನು / ತರಕಾರಿ ಬೀಜ ಕಂಪನಿಗಳ ತರಕಾರಿ ಬೀಜಗಳನ್ನು ಮಾರಾಟಕ್ಕೆ ತರುವಂತಿಲ್ಲ. ವಾಣಿಜ್ಯ ಉದ್ದೇಶದ ನರ್ಸರಿಗಳಿಂದ ಸಸಿಗಳನ್ನು ತರುವಂತಿಲ್ಲ. ಮನೆಯಲ್ಲೇ ಬೆಳೆಸಿದ ಸಸಿಗಳನ್ನು ಅಥವಾ ತರಕಾರಿ ಬೀಜಗಳು, ಹಾಗೂ ಮಾರಾಟಕ್ಕೆ ತರುವ ಗೃಹ ಉತ್ಪನ್ನಗಳಲ್ಲಿ ಕೃತಕ ಬಣ್ಣಗಳನ್ನು ಹಾಗೂ ರಾಸಾಯನಿಕಗಳನ್ನು ಉಪಯೋಗಿಸುವಂತಿಲ್ಲ ಎಂಬ ಷರತ್ತುಗಳನ್ನು ಆಯೋಜಕರು ಪ್ರಕಟಣೆಯಲ್ಲಿ ನೀಡಿದ್ದು ಹೆಚ್ಚಿನ ಮಾಹಿತಿಗಾಗಿ tel:+918660553054 tel:+9108384233333
    ಸಂಪರ್ಕಿಸಲು ಕೋರಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top