Slide
Slide
Slide
previous arrow
next arrow

ಗುರು ಪೂರ್ಣಿಮೆ; ಪೂರ್ವಭಾವಿ ಸಭೆ

300x250 AD

ಹಳಿಯಾಳ: ಪಟ್ಟಣದ ಮರಾಠಾ ಭವನದಲ್ಲಿ ಮರಾಠಾ ಜಗದ್ಗುರು ಮಂಜುನಾಥ ಭಾರತೀ ನೇತೃತ್ವದಲ್ಲಿ ಗುರು ಪೂರ್ಣಿಮಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಶ್ರೀಹರಿ ಗೋಸಾವಿ ಮಠ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಮರಾಠಾ ಸಮಾಜದ ಮುಖಂಡರುಗಳು ಚರ್ಚೆ ನಡೆಸಿ ಜು.9ರಂದು ನಡೆಯಲಿರುವ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಹಾನಗಲ್ ಶಾಸಕ ಶ್ರೀನಿವಾಸರಾವ ಮಾನೆ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕ ಸುನೀಲ ಹೆಗಡೆ, ಮಾಜಿ ಎಮ್‌ಎಲ್‌ಸಿ ಎಸ್.ಎಲ್.ಘೋಟ್ನೇಕರ್ ಮುಂತಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

300x250 AD

ಸಭೆಯಲ್ಲಿ ಕೆಕೆಎಮ್‌ಪಿ ಜಿಲ್ಲಾಧ್ಯಕ್ಷ ಪ್ರಕಾಶ ಫಾಕರೆ, ತಾಲೂಕಾಧ್ಯಕ್ಷ ಚೂಡಪ್ಪ ಬೊಬಾಟಿ, ಜಿಲ್ಲಾ ಸಮಿತಿ ಸದಸ್ಯರುಗಳಾದ ಸುಭಾಶ ಕೊರವೇಕರ, ಚಂದ್ರಕಾಂತ ಕಮ್ಮಾರ, ತುಕಾರಾಮ ಪಟ್ಟೇಕಾರ,ಸಂಜು ಕೋಳೂರ ಶ್ರೀಹರಿ ಗೋಸಾವಿ ಮಠ ಟ್ರಸ್ಟ್ ನ ಪದಾಧಿಕಾರಿಗಳಾದ ಟಿ.ಆರ್.ನಾಕಾಡಿ, ಗೋವಿಂದ ದಲಾಲ, ದೇಮಾನಿ ಸಿರೋಜಿ, ಯೋಗರಾಜ ಕರಾಂಡೆ, ನಾರಾಯಣ ಠೋಸೂರ, ತಾನಾಜಿ ಪಟ್ಟೇಕಾರ,ಯಲ್ಲಪ್ಪ ಮಲವಣಕರ, ಸಂತೋಷ ಮಿರಾಶಿ, ನಾರಾಯಣ ದಡ್ಡಿ, ಅರುಣ ಗೋಂಧಳಿ, ಅಶೋಕ ಮಿರಾಶಿ, ತಾಲೂಕಿನ ವಾರಕರಿ ಮುಖಂಡರುಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top