• Slide
    Slide
    Slide
    previous arrow
    next arrow
  • ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಮುಖಂಡರಿಗೆ ಸನ್ಮಾನ

    300x250 AD

    ಅಂಕೋಲಾ: ತಾಲೂಕಿನ ಬೆಳಂಬಾರದ ಹನುಮಂತ ಗೌಡ ಅವರ ಆಶ್ರಯಧಾಮಕ್ಕೆ ಬೇಟಿ ನೀಡಿ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಗುರುರಾಜ ಎನ್., ಜಂಟಿ ಕಾರ್ಯದರ್ಶಿ ಸುನೀಲ ಎನ್. ಭೇಟಿ ನೀಡಿದರು.
    ಹನುಮಂತ ಗೌಡರ ಅಜ್ಜ ಶಿವು ಗೌಡ ಅವರು 1927ರಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪಾರ್ಶ್ವವಾಯು ಆದಾಗ ಸ್ವತಃ ಶಿವು ಗೌಡರೇ ಬೆಂಗಳೂರಿಗೆ ತೆರಳಿ 21 ದಿನಗಳ ಕಾಲ ಔಷಧೋಪಚಾರ ಮಾಡಿ ಗುಣಮುಖರನ್ನಾಗಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿ ಶಿವು ಗೌಡರ ಪ್ರತಿಮೆಗೆ ಗೌರವ ಸಲ್ಲಿಸಿದರು.
    ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ, ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಯುವ ಘಟಕದ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ., ನಾಗೇಂದ್ರ ಗೌಡ ಉಪಸ್ಥಿತರಿದ್ದು, ಅವರನ್ನು ಸನ್ಮಾನಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top