ಸಿದ್ದಾಪುರ:- ಇಂದಿನ ಆಹಾರ ಪದ್ಧತಿಯಲ್ಲಿ ಮನುಷ್ಯನು ಆರೋಗ್ಯಯುತ ಜೀವನ ನಡೆಸಲಿಕ್ಕೆ ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಅದರಲ್ಲಿ ಸೈಕಲ್ ಹೊಡೆಯುವುದು ಅತ್ಯುತ್ತಮ ವ್ಯಾಯಾಮಗಳಲ್ಲೊಂದಾಗಿದೆ. ಪ್ರತಿಯೊಬ್ಬರೂ ಸೈಕಲ್ ಹೊಡೆಯುವುದನ್ನು ರೂಢಿ ಮಾಡಿಕೊಂಡು ಆರೋಗ್ಯಯುತ ಜೀವನ ನಡೆಸುವಂತೆ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಕರೆ ನೀಡಿದರು.
ಅವರು ಮಂಗಳವಾರ ಕಾನಳ್ಳಿ ಶ್ರೀ ಚೌಡೇಶ್ವರಿ ದೇವಿ ಕಾಣದ ಆವರಣದಲ್ಲಿ ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಮೇಶ್ವರಯ್ಯ ಕಾನಳ್ಳಿಮಠ ಮಾತನಾಡಿ ನೆಮ್ಮದಿಯ ಜೀವನ ನಡೆಸಲು ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೃದಯ ಉತ್ತಮವಾಗಿರಲು, ಬೊಜ್ಜು ಕರಗಿಸಲು ಹಾಗೂ ಸದೃಢ ದೇಹಕ್ಕಾಗಿ ಸೈಕಲ್ ತಿಳಿಯುವುದು ಅವಶ್ಯ ವಾಗಿದೆ. ಸೈಕಲ್ ತುಳಿಯುವವರು ಆರೋಗ್ಯಯುತವಾಗಿರುವುದನ್ನು ನೋಡುತ್ತೇವೆ. ಇಂದಿನ ಜನತೆ ಸೈಕಲ್ ತುಳಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಸೈಕಲ್ ಹೊಡೆಯುತ್ತಿರುವ ಈಶ್ವರ ನಾಯ್ಕ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುರೇಶ ಮಡಿವಾಳ, ರವಿ ಕಾನಳ್ಳಿ, ರಾಮಣ್ಣ ಕಾನಳ್ಳಿ, ಕೃಷ್ಣ ಕಾನಳ್ಳಿ, ಲಕ್ಷ್ಮಣ ಕಾನಳ್ಳಿ, ದೇವೇಂದ್ರ ಕಾನಳ್ಳಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಗೋಪಾಲ ಕಾನಳ್ಳಿ ಸ್ವಾಗತಿಸಿ, ನಿರೂಪಿಸಿದರು.