Slide
Slide
Slide
previous arrow
next arrow

ವಿಚಾರಣೆಗೆ ಕರೆತಂದ ವ್ಯಕ್ತಿ ಸ್ಟೇಷನ್’ನಲ್ಲೇ ವಿಷ ಕುಡಿದು ಆತ್ಮಹತ್ಯೆ

300x250 AD

ಹೊನ್ನಾವರ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಕರೆತಂದ ವ್ಯಕ್ತಿಯೋರ್ವ ವಿಷ ಸೇವಿಸಿ ಮೃತಪಟ್ಟ ಘಟನೆ ಸಂಭವಿಸಿದೆ.
ಇತ್ತೀಚಿಗೆ ಪಟ್ಟಣದ ಸಾಲೆಹಿತ್ತಲ್ ಮನೆಯಲ್ಲಿ ಬಂಗಾರ ಕಳ್ಳತನ ಪ್ರಕರಣಕ್ಕೆ ಪತ್ತೆ ಕಾರ್ಯದಲ್ಲಿರುವಾಗ ಚಿನ್ನಕ್ಕೆ ಹೊಳಪು ನೀಡುತ್ತೇವೆ ಎಂದು ಮೃತ ವ್ಯಕ್ತಿಯು ತಂದೆಯ ಜೊತೆ ಪಟ್ಟಣದಲ್ಲಿ ವಂಚಿಸಲು ಯತ್ನಿಸುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ ವಿಚಾರಣೆಗೆ ಕರೆತರಲಾಗಿತ್ತು. ವಿಚಾರಣೆಯ ಹಂತದಲ್ಲಿರುವಾಗ ಆರೋಪಿತನು ನೀರು ಕುಡಿಯುತ್ತೆನೆ ಎಂದು ಬ್ಯಾಗ್‌ನಲ್ಲಿ ತಂದಿದ್ದ ಸೈನೆಡ್ ಎಂಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತಪಟ್ಟ ವ್ಯಕ್ತಿ ಬಿಹಾರ ಮೂಲದ ದಿಲೀಪ್ ಮಂಡೇಲ್ ಎಂದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ವಿಚಾರಣೆ ಮುಂದುವರೆಸಿದ್ದಾರೆ. ಘಟನೆಯ ಕುರಿತು ಹಲವು ಅನುಮಾನಗಳು ಎಡೆಮಾಡಿಕೊಡುತ್ತಿದ್ದು, ತನಿಖೆಯ ಬಳಿಕವೇ ಘಟನೆಯ ಕುರಿತು ಸ್ಪಷ್ಟ ಮಾಹಿತಿ ತಿಳಿದುಬರಬೇಕಿದೆ.

300x250 AD
Share This
300x250 AD
300x250 AD
300x250 AD
Back to top