Slide
Slide
Slide
previous arrow
next arrow

ನಾಟಾ ಸಾಗಾಟದ ವಾಹನಗಳ ಕಟ್ಟುನಿಟ್ಟಿನ ತಪಾಸಣೆ

300x250 AD

ಶಿರಸಿ: ಮುಂಡಗೋಡ ಕಟ್ಟಿಗೆ ಡಿಪೋದಿಂದ ಅಕ್ರಮವಾಗಿ ಸಾಗವಾನಿ ಕಟ್ಟಿಗೆ ಸಾಗಾಟ ಮಾಡಿದ ಪ್ರಕರಣದಿಂದ ಬೆಚ್ಚಿಬಿದ್ದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆ, ಸಂಶಯ ಬಂದ ಕಡೆಗಳೆಲ್ಲೆಲ್ಲ ಮುಲಾಜಿಲ್ಲದೆ ದಾಳಿ ನಡೆಸಿ ಸಂಶಯ ನಿವಾರಿಸಿಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿ ರಸ್ತೆಯಿಂದ ವಾಹನವೊಂದರಲ್ಲಿ ಕಟ್ಟಿಗೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ವಲಯ ಅರಣ್ಯಾಧಿಕಾರಿ ನಿಂಗಾನಿಯವರು ವಾಹನವನ್ನು ತಡೆದು ತಪಾಸಣೆಗೆ ಒಳಪಡಿದರು. ನಂತರ ವಾಹನವನ್ನು ಕಟ್ಟಿಗೆ ಸಮೇತವಾಗಿ ತಮ್ಮ ಕಚೇರಿಗೆ ತಂದು ಮರು ಪರಿಶೀಲನೆ ನಡೆಸಿದ ಬಳಿಕ ಕಟ್ಟಿಗೆ ತರಲು ಅರಣ್ಯ ಇಲಾಖೆಯಿಂದ ಪರವಾನಗಿ ಹೊಂದಿರುವದನ್ನು ಖಚಿತಪಡಿಸಿಕೊಂಡ ಮೇಲೆ ವಾಹನವನ್ನು ಕಟ್ಟಗೆ ಸಮೇತವಾಗಿ ಬಿಡುಗಡೆ ಮಾಡಿದರು. ಒಟ್ಟಿನಲ್ಲಿ ಮುಂಡಗೋಡ ಪ್ರಕರಣ ಅರಣ್ಯ ಇಲಾಖೆಗೆ ಬಿಸಿತುಪ್ಪವಾಗಿ ಪರಿಣಿಮಿಸಿದೆ.

300x250 AD
Share This
300x250 AD
300x250 AD
300x250 AD
Back to top