• Slide
    Slide
    Slide
    previous arrow
    next arrow
  • ಧರೆಗುರುಳಿದ ಮರ; ವಿದ್ಯುತ್ ಕಂಬಗಳಿಗೆ ಹಾನಿ

    300x250 AD

    ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ- ಗಾವಟಾನ ರಸ್ತೆಯಲ್ಲಿ ಮರವೊಂದು ಧರೆಗುರುಳಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದಲ್ಲದೇ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

    ಅಂಬೇವಾಡಿಯಿoದ ಮೌಳಂಗಿಗೆ ಹೋಗುವ ರಸ್ತೆಯ ಆರಂಭದಲ್ಲೆ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿ, ವಿದ್ಯುತ್ ತಂತಿ ಸೇರಿದಂತೆ ಮರ ಸಹಿತ ರಸ್ತೆಯ ಮೇಲೆ ಬಿದ್ದ ಪರಿಣಾಮವಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.

    300x250 AD

    ಕೆಲ ಹೊತ್ತು ವಿದ್ಯುತ್ ಸಂಪರ್ಕವು ಸ್ಥಗಿತಗೊಂಡಿತ್ತು. ತಕ್ಷಣವೆ ಹೆಸ್ಕಾಂ ಶಾಖಾಧಿಕಾರಿ ಪರಶುರಾಮ ಉಪ್ಪಾರ್ ಅವರ ನೇತೃತ್ವದಲ್ಲಿ ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಲ್ಲಿ ರಸ್ತೆಗುರುಳಿದ್ದ ಮರವನ್ನು ತೆರವುಗೊಳಿಸಿ, ಆನಂತರ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿ, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top