Slide
Slide
Slide
previous arrow
next arrow

ಗೋಳಿ ಪ್ರೌಢಶಾಲೆಗೆ ಹಳೆ ವಿದ್ಯಾರ್ಥಿಗಳೀರ್ವರಿಂದ ದೇಣಿಗೆ

300x250 AD

ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ವತಿಯಿಂದ ನಡೆಸಲ್ಪಡುತ್ತಿರುವ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಗೆ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಎನ್. ಭಟ್ಟ ದಾಯಿಮನೆ ಹಾಗೂ ಮಹಾಬಲೇಶ್ವರ ಹೆಗಡೆ ಸಂತೇಮನೆ(ಬೆ೦ಗಳೂರು) ಇವರು ಕ್ರಮವಾಗಿ 25,000/- ಹಾಗೂ 10,000/- ರೂ ಮೊತ್ತದ ದೇಣಿಗೆಯನ್ನು ನೀಡಿ, ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ.
ಇವರ ಈ ಕೊಡುಗೆಯನ್ನು ಸ್ಮರಿಸಿ, ಭಗವಂತನು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲೆಂದು ಆಶಿಸಿ, ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಎಲ್. ಹೆಗಡೆ ಮತ್ತುಕಾರ್ಯಕಾರಿ ಮಂಡಳಿಯ ಸದಸ್ಯರುಗಳು ಹಾಗೂ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರು ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top