Slide
Slide
Slide
previous arrow
next arrow

ಜೂ.24 ಕ್ಕೆ TRC ಚುನಾವಣೆ; ಸಾಮಾನ್ಯ ಕ್ಷೇತ್ರಕ್ಕೆ 13, ‘ಬ’ ವರ್ಗಕ್ಕೆ ಈರ್ವರಿಂದ ಸ್ಪರ್ಧೆ

300x250 AD

ಶಿರಸಿ: ಇಲ್ಲಿನ ಸಹಕಾರಿ ಸಂಸ್ಥೆಯಾಗಿರುವ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., (ಟಿಆರ್ಸಿ) ಶಿರಸಿ ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ಘೋಷಣೆಯಾಗಿದ್ದು, ಜೂ.24 ರಂದು ಚುನಾವಣೆ ನಡೆಯಲಿದೆ.

ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ 8 ಜನರಿಗೆ ಅವಕಾಶವಿದ್ದು, 13 ಜನ ಉಮೇಧುವಾರಿಕೆ ತೋರಿಸಿದ್ದಾರೆ. ಹಿಂದುಳಿದ ವರ್ಗ ‘ಬ’ 1 ಸ್ಥಾನವಿದ್ದು, 2 ಜನರು ಉಮೇಧುವಾರಿಕೆ ತೋರಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಉಮೇಧುವಾರಿಕೆದಾರರ ಪಟ್ಟಿ ಇಲ್ಲಿದೆ:
ಗಜಾನನ ವೆಂಕಟ್ರಮಣ ಜೋಶಿ ಕಾಗೇರಿ, ಗಣಪತಿ ಶೇಷಗಿರಿ ರಾಯ್ಸದ್, ದತ್ತಾತ್ರೇಯ ಗಣಪತಿ ಹೆಗಡೆ ಶಂಕರಗದ್ದೆ ಕಂಪ್ಲಿ, ಪ್ರಭಾಕರ ಶಂಭುಲಿಂಗ ಹೆಗಡೆ ತಾರಗೋಡ, ರಮಾಕಾಂತ ವೆಂಕಟ್ರಮಣ ಹೆಗಡೆ ಚಿಪಗಿ, ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಲೋಕೇಶ ಗುರುನಾಥ ಹೆಗಡೆ ಹುಲೇಮಳಗಿ, ವಿಘ್ನೇಶ್ವರ ರಾಮಚಂದ್ರ ಹೆಗಡೆ ಭೈರುಂಬೆ, ವಿಶ್ವನಾಥ ಗೋಪಾಲಕೃಷ್ಣ ಹೆಗಡೆ ಸೋಮ್ನಳ್ಳಿ, ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ, ಶಿವಾನಂದ ಗಣಪತಿ ಭಟ್ಟ ನಿಡಗೋಡ, ಶಿವಾನಂದ ಸತ್ಯನಾರಾಯಣ ಭಟ್ಟ ಸಣ್ಣಕೇರಿ, ಸುಬ್ರಾಯ ನಾರಾಯಣ ಹೆಗಡೆ ಹಾವಳಿಮನೆ‌ ಉಮೇಧುವಾರಿಕೆ ತೋರಿದ್ದಾರೆ.

300x250 AD

ಹಿಂದುಳಿದ ‘ಬ’ ವರ್ಗದಿಂದ ಶಿವಾಜಿ ಬಂಗಾರಪ್ಪ ಗೌಡರ್ ಬಾಳೆಕೊಪ್ಪ, ಸಂತೋಷಕುಮಾರ ಚಾಮರಾಜ ಗೌಡರ ತೋಟದ ಕಸಗೆ ಉಮೇಧುವಾರಿಕೆ ತೋರಿದ್ದಾರೆ. ಹಿಂದುಳಿದ ‘ಅ’ 1 ಸ್ಥಾನಕ್ಕೆ ಈರಾ ನಾರಾಯಣ ಗೌಡ ಕಳವೆ, ಸಾಮಾನ್ಯ ಮಹಿಳಾ ಅಭ್ಯರ್ಥಿಗಳ 2 ಸ್ಥಾನಕ್ಕೆ ಹಾಲಿ ನಿರ್ದೇಶಕರುಗಳೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Share This
300x250 AD
300x250 AD
300x250 AD
Back to top