Slide
Slide
Slide
previous arrow
next arrow

ಜಾಗನಳ್ಳಿಯಲ್ಲಿ ‘ನಾದಪೂಜೆ’ ಮೂಲಕ ಸಂಕಷ್ಟಿ ವೃತಾಚರಣೆ

300x250 AD

ಶಿರಸಿ: ತಾಲೂಕಿನ ಜಾಗನಳ್ಳಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ “ನಾದಪೂಜೆ” ಸಂಗೀತ ಕಾರ್ಯಕ್ರಮದ ಮೂಲಕ ಸಂಕಷ್ಟಿ ವೃತಾಚರಣೆಯನ್ನು ನಡೆಸಲಾಯಿತು.

ಶ್ರೀ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದಲ್ಲಿ ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಇವರು ಸಂಘಟಿಸಿದ್ದ ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ಸಂಗೀತಾ ಹೆಗಡೆ ಗಿಳಿಗುಂಡಿ ತಮ್ಮ ಸಂಗೀತ ಕಛೇರಿ ನಡೆಸಿಕೊಟ್ಟು ರಾಗ್ ಮಧುವಂತಿಯನ್ನು ವಿಸ್ತಾರವಾಗಿ ಹಾಡಿದರು. ತದನಂತರದಲ್ಲಿ ಗಣಪತಿಯ ಕುರಿತಾದ ಹಾಡು, ನಂದನವನದ ಗೋಪಿಯ ಕುರಿತಾದ ಹಾಡು ಹಾಗೂ ರಾಮ್ ಭಜನೆಯನ್ನು ಭಕ್ತಿಯಿಂದ ಹಾಡಿ ಸಂಗೀತಾಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಿದರು.

300x250 AD

ನಂತರದಲ್ಲಿ ಖ್ಯಾತ ಗಾಯಕ ವಿ.ನಾಗಭೂಷಣ ಹೆಗಡೆ ಬಾಳೆಹದ್ದ, ತಮ್ಮ ಗಾಯನ ಕಾರ್ಯಕ್ರಮ ನಡೆಸಿಕೊಟ್ಟು, ಆರಂಭದಲ್ಲಿ ರಾಗ್ ರಾಗೇಶ್ರೀಯನ್ನು ಪ್ರಸ್ತುತಗೊಳಿಸಿದರು. ಭಕ್ತಿ, ಭಾವ ರಸಗಳಿಂದ ಕೂಡಿ ಹಾಡುತ್ತ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಕು. ಸಂಗೀತಾ ಮತ್ತು ನಾಗಭೂಷಣ ಹೆಗಡೆ ಬಾಳೆಹದ್ದ ಅವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ಸಾರಂಗಿಯಲ್ಲಿ ಗುರುಪ್ರಸಾದ ಹೆಗಡೆ ಧಾರವಾಡ ಹಾಗೂ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ ಮತ್ತು ಹಿನ್ನೆಲೆಯ ತಂಬೂರಾದಲ್ಲಿ ವರುಣ ಭಟ್ಟ ಸಾಥ್ ನೀಡಿದರು.
ಜಾಗನಳ್ಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಹೆಗಡೆ ಮತ್ತು ಇನ್ನಿತರರು ಹಾಗೂ ಪ್ರಧಾನ ಅರ್ಚಕರು ಎಲ್ಲ ಕಲಾವಿದರಿಗೆ ದೇವಸ್ಥಾನದ ಪ್ರಸಾದ ನೀಡಿ ಗೌರವಿಸಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ದಿನೇಶ ಹೆಗಡೆ ಗಿಳಿಗುಂಡಿ ವಂದಿಸಿದರು.

Share This
300x250 AD
300x250 AD
300x250 AD
Back to top