• Slide
    Slide
    Slide
    previous arrow
    next arrow
  • ಟಿಪ್ಪರ್-ಬೈಕ್ ಡಿಕ್ಕಿ: ಬೈಕ್ ಸವಾರನ ದುರ್ಮರಣ

    300x250 AD

    ಹೊನ್ನಾವರ: ಪಟ್ಟಣದ ಕುಳಕೋಡ್ ಕ್ರಾಸ್ ಸಮೀಪ ಬೈಕ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಜಲವಳ್ಳಿ ಗ್ರಾಮ ಪಂಚಾಯತ್‌ನ ಕರಿಕುರ್ವಾ ನಿವಾಸಿ ಹರೀಶ್ ಕೃಷ್ಣ ಮೇಸ್ತ (28)ಮೃತ ದುರ್ದೈವಿಯಾಗಿದ್ದು, ಆರೋಪಿತ ಲಾರಿ ಚಾಲಕ ತಾಲೂಕಿನ ಹಳದೀಪುರ ಸಾಲೀಕೇರಿಯ ನಿವಾಸಿ ಅಣ್ಣಪ್ಪ ನಾಗಪ್ಪ ಗೌಡ ಎಂದು ಹೇಳಲಾಗಿದೆ. ಗೇರುಸೊಪ್ಪಾ ಸರ್ಕಲ್ ಕಡೆಯಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಟಿಪ್ಪರನ್ನು, ಕುಳಕೋಡ್ ಕ್ರಾಸ್ ಸಮೀಪ ಯಾವುದೇ ಸೂಚನೆ ನೀಡದೆ ಏಕಾಏಕಿ ಬಲಕ್ಕೆ ತಿರುಗಿಸಿದ್ದು, ಗೇರುಸೊಪ್ಪಾ ಮಾರ್ಗದಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ.

    ಡಿಕ್ಕಿಯ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top