Slide
Slide
Slide
previous arrow
next arrow

ಮನನೊಂದು ಯುವತಿ ಆತ್ಮಹತ್ಯೆ

300x250 AD

ಹೊನ್ನಾವರ: ತಾಲೂಕಿನ ಅನಿಲಗೋಡ ಮೂಲದ ಯುವತಿ ಅಕ್ಷತಾ ನಾಯ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಮಂಕಿ ಮೂಲದ ಯೋಗೀಶ ನಾಯ್ಕ ಎನ್ನುವಾತ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ನನ್ನ ಹೊರತಾಗಿ ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ಮಾನ ಹರಾಜು ಹಾಕುತ್ತೇನೆಂದು ಬೆದರಿಸಿದ್ದ ಎಂದು ಯುವತಿಯ ಕಡೆಯವರು ಆರೋಪಿಸಿದ್ದಾರೆ.
ಇದರಿಂದಾಗಿ ಮನನೊಂದು ಯುವತಿ ಇಡಗುಂಜಿ ಕುಳಿಮನೆಯ ಸಂಬOಧಿಕರ ಮನೆಯ ಸಮೀಪದ ಗೇರು ಮರಕ್ಕೆ ನೈಲಾನ್ ಸೀರೆಯನ್ನೇ ಕುತ್ತಿಗೆಗೆ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳ ಆತ್ಮಹತ್ಯೆಗೆ ಯೋಗೀಶ ನಾಯ್ಕ ಕಾರಣ ಎಂದು ಮೃತಳ ತಂದೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top