• Slide
    Slide
    Slide
    previous arrow
    next arrow
  • ಮನನೊಂದು ಯುವತಿ ಆತ್ಮಹತ್ಯೆ

    300x250 AD

    ಹೊನ್ನಾವರ: ತಾಲೂಕಿನ ಅನಿಲಗೋಡ ಮೂಲದ ಯುವತಿ ಅಕ್ಷತಾ ನಾಯ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಮಂಕಿ ಮೂಲದ ಯೋಗೀಶ ನಾಯ್ಕ ಎನ್ನುವಾತ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ನನ್ನ ಹೊರತಾಗಿ ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ಮಾನ ಹರಾಜು ಹಾಕುತ್ತೇನೆಂದು ಬೆದರಿಸಿದ್ದ ಎಂದು ಯುವತಿಯ ಕಡೆಯವರು ಆರೋಪಿಸಿದ್ದಾರೆ.
    ಇದರಿಂದಾಗಿ ಮನನೊಂದು ಯುವತಿ ಇಡಗುಂಜಿ ಕುಳಿಮನೆಯ ಸಂಬOಧಿಕರ ಮನೆಯ ಸಮೀಪದ ಗೇರು ಮರಕ್ಕೆ ನೈಲಾನ್ ಸೀರೆಯನ್ನೇ ಕುತ್ತಿಗೆಗೆ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳ ಆತ್ಮಹತ್ಯೆಗೆ ಯೋಗೀಶ ನಾಯ್ಕ ಕಾರಣ ಎಂದು ಮೃತಳ ತಂದೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top