Slide
Slide
Slide
previous arrow
next arrow

ವಿವೇಕಾನಂದ ನೈತಿಕ ಹಾಗೂ ಆಧ್ಯಾತ್ಮಿಕ ವಿದ್ಯಾ ಟ್ರಸ್ಟ್: ಕೆಲಸಕ್ಕೆ ಅರ್ಜಿ ಆಹ್ವಾನ

300x250 AD

ಶಿರಸಿ: ಇಲ್ಲಿನ ಸೇವಾ ಮನೋಭಾವನೆಯಿಂದ ಕೂಡಿದ ಸಂಸ್ಥೆಯಾದ ಗೋಣೂರಿನ ವಿವೇಕಾನಂದ ನೈತಿಕ ಹಾಗೂ ಆಧ್ಯಾತ್ಮಿಕ ವಿದ್ಯಾಟ್ರಸ್ಟ (ರಿ) ಶಾಂತಿಧಾಮದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಲು, ಸಮಾಜ ಸೇವೆ ಮಾಡಲು ಬಯಸುವ ಯುವಕ / ಯುವತಿಯರಿಗೆ ಕರೆ ನೀಡಲಾಗಿದೆ.

ನಿರುದ್ಯೋಗದಿಂದ ಇರುವ, ಸ್ವಂತ ಕಾಲಮೇಲೆ ನಿಲ್ಲಲು ಬಯಸುವ ಉತ್ಕಟ ಸೇವಾ ಮನೋಭಾವನೆಯುಳ್ಳ ಎಸ್.ಎಸ್.ಎಲ್.ಸಿ.ಫೇಲ್ ಅಥವಾ ಪಾಸಾದ ಪಿ.ಯು.ಸಿ., ಪದವೀಧರ ಯುವಕ / ಯುವತಿಯರಿಗೆ ಕರೆ ನೀಡಲಾಗಿದೆ. ಶಿರಸಿಯಿಂದ 10 ಕಿ.ಮೀ. ಅಂತರದಲ್ಲಿರುವ ಟ್ರಸ್ಟಿನಲ್ಲಿ ಸೇರಬಯಸುವವರಿಗೆ ಊಟ, ವಸತಿಯ ಸೌಕರ್ಯದ ಜೊತೆ ಗೌರವಧನವನ್ನು ನೀಡಲಾಗುವುದು.

300x250 AD

ಸೇರಬಯಸುವವರು ತಮ್ಮ ಬಯೋಡೇಟಾದೊಂದಿಗೆ ಶಿರಸಿ ಕೋಟೆಗಲ್ಲಿಯಲ್ಲಿರುವ ವಿವೇಕಾನಂದ ಮಾಹಿತಿ ಕೇಂದ್ರದಲ್ಲಿ ದೊರಕುವ ನಮೂನಾ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಮಾಹಿತಿ, ನರ್ಸಿಂಗ್ ಕೋರ್ಸ ಮಾಡಿದವರಿಗೆ ಹಾಗೂ ಪದವೀಧರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ tel:+919483914791/ tel:+919483501428/ tel:+9108384200779/ tel:+9108384224288(ಶಾಲಾ ಮಾಹಿತಿ ಕೇಂದ್ರ) ಕೋಟೆಗಲ್ಲಿ, ಶಿರಸಿ ಸಂಪರ್ಕಿಸಲು ಕೋರಿದೆ.

Share This
300x250 AD
300x250 AD
300x250 AD
Back to top