Slide
Slide
Slide
previous arrow
next arrow

ದೇಶಪಾಂಡೆಯವರ ಅಭಿವೃದ್ಧಿ ಕಾರ್ಯಕ್ಕೆ ಸಂದ ಗೆಲುವು: ತಸ್ವರ್ ಸೌದಾಗರ

300x250 AD

ದಾಂಡೇಲಿ: ಕಳೆದ 45 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಸಂದ ಜಯ ಎಂದು ನಗರಸಭೆಯ ಮಾಜಿ ಅಧ್ಯಕ್ಷ ತಸ್ವರ್ ಸೌದಾಗರ ತಿಳಿಸಿದ್ದಾರೆ.
ದಾಂಡೇಲಿಯನ್ನು ತಾಲ್ಲೂಕನ್ನಾಗಿಸಿದ ಹಿರಿಮೆ, ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಗರಿಮೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನೀಡಿದ ದೇಶಪಾಂಡೆಯವರ ಕೊಡುಗೆಯನ್ನು ಕ್ಷೇತ್ರದ ಮತದಾರರು ತಿಳಿದುಕೊಂಡೆ, ದೇಶಪಾಂಡೆಯವರಿ0ದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮನಗಂಡು ಈ ಬಾರಿಯು ಐತಿಹಾಸಿಕ ಗೆಲುವನ್ನು ಕ್ಷೇತ್ರದ ಮತದಾರರು ನೀಡಿದ್ದಾರೆ ಎಂದು ಹೇಳಿದ್ದಾರೆ.

300x250 AD
Share This
300x250 AD
300x250 AD
300x250 AD
Back to top