Slide
Slide
Slide
previous arrow
next arrow

ಕಲ್ಯಾಣಿಯ ಹೂಳೆತ್ತಿದ ಯುವ ಬ್ರಿಗೇಡ್ ಕಾರ್ಯಕರ್ತರು

300x250 AD

ಕುಮಟಾ: ತಾಲೂಕಿನ ಹಂದಿಗೋಣದ ಉದ್ಭವ ಮಾರುತಿ ದೇವಾಲಯದ ಕಲ್ಯಾಣಿಯ ಮೂರನೇ ಹಂತದ ಹೂಳೆತ್ತುವ ಕಾರ್ಯವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಯಶಸ್ವಿಗೊಳಿಸಿದರು.
ತಾಲೂಕಿನ ಹಂದಿಗೋಣದ ಉದ್ಭವ ಮಾರುತಿ ದೇವಾಲಯದ ಕಲ್ಯಾಣಿಯಲ್ಲಿ ಹೂಳು ತುಂಬಿಕೊಂಡು ಕಲುಷಿತವಾಗಿತ್ತು. ಇದನ್ನು ಗಮನಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು ಪ್ರತಿ ಭಾನುವಾರು ಕಲ್ಯಾಣಿಯಲ್ಲಿ ತುಂಬಿದ್ದ ಹೂಳನ್ನು ತೆಗೆಯುವ ಕಾರ್ಯಾಚರಣೆಯನ್ನು ಶ್ರಮದಾನದ ಮೂಲಕ ಕೈಗೊಂಡಿದ್ದರು.

ಸತತ ಮೂರು ಭಾನುವಾರ ಹೂಳೆತ್ತುವ ಕಾರ್ಯವನ್ನು ಕೈಗೊಳ್ಳುವ ಮೂಲಕ ಈ ಭಾನುವಾರ ಕಲ್ಯಾಣಯಲ್ಲಿ ತುಂಬಿದ್ದ ಎಲ್ಲ ಹೂಳುಗಳನ್ನು ಹೊರ ತೆಗೆದು ಸ್ವಚ್ಛಗೊಳಿಸುವ ಮೂಲಕ ಸ್ಥಳೀಯರ ಪ್ರಶಂಸೆಗೆ ಯುವ ಬ್ರಿಗೇಡ್ ಕಾರ್ಯಕರ್ತರು ಪಾತ್ರರಾದರು. ಈ ಶ್ರಮದಾನಕ್ಕೆ ಸ್ಥಳೀಯರು ಕೂಡ ಸಹಕಾರ ನೀಡಿದರು.

300x250 AD
Share This
300x250 AD
300x250 AD
300x250 AD
Back to top