Slide
Slide
Slide
previous arrow
next arrow

ಕಾಂಗ್ರೆಸ್ ಪ್ರಣಾಳಿಕೆ‌ ಬಡವರಿಗೆ ನೆರವಾಗಲಿದೆ: ದತ್ತಾ ನಾಯ್ಕ್

300x250 AD

ಅಂಕೋಲಾ: ಬಡ- ಬಗ್ಗರಿಗೆ ಕಾಂಗ್ರೆಸ್ ತೊರಿಸುವಷ್ಟು ಪ್ರೀತಿ,ಕಾಳಜಿ ಮತ್ಯಾವಪಕ್ಷವು ತೋರಿಸುವುದಿಲ್ಲ ಎಂದು ತಾಪಂ ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ದತ್ತಾ ನಾಯ್ಕ ಹೇಳಿದರು.

ಅವರು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ತಾಲೂಕಿನ ಬೆಳಾಬಂದರ್ ಹಾಗೂ ಮುಲ್ಲಾವಾಡದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡು ಮಾತನಾಡಿ ಬಿಜೆಪಿ ಸರ್ಕಾರದ ಬೆಲೆ ಏರಿಕೆಗೆ ಬಡವರು ಹೈರಾಣಾಗಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಇದು ಮುಂದಿನ ದಿನಗಳಲ್ಲಿ ಬಡವರ ಕಷ್ಟಕ್ಕೆ ನೆರವಾಗುತ್ತದೆ. ಹಾಗೆಯೇ ಕ್ಷೇತ್ರದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ನಮ್ಮ ಅಭ್ಯರ್ಥಿ ಸತೀಶ್ ಸೈಲ್ ಅವರನ್ನು ಬಹುಮತದಿಂದ ಆರಿಸಿ ತರುತ್ತಾರೆ ಎಂಬ ಆತ್ಮವಿಶ್ವಾಸವಿದೆ ನಮ್ಮೆಲ್ಲರಲ್ಲಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಸಯ್ಯದ್ ಪಪ್ಪು, ಮೋಹನ್ ನಾಯ್ಕ, ನಾಗೇಂದ್ರ ನಾಯ್ಕ, ಪ್ರಭಾವತಿ ನಾಯ್ಕ, ರಂಜಿತ್ ಎಂ.ನಾಯ್ಕ, ಆದರ್ಶ ನಾಯ್ಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top