Slide
Slide
Slide
previous arrow
next arrow

ನಿವೇದಿತ್ ಆಳ್ವಾ ಪರ ಮತಯಾಚಿಸಿದ ದೇಶಪಾಂಡೆ

300x250 AD

ಕುಮಟಾ: ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಶುಕ್ರವಾರ ತಾಲೂಕಿನ ಪ್ರಚಾರ ನಡೆಸಿದರು.

ಮಾರ್ಗರೇಟ್ ಆಳ್ವಾ ಹಾಗೂ ದೇಶಪಾಂಡೆ ನಡುವೆ ಕಳೆದ ಮೂರು ದಶಕಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಲ್ಲೇ ಇತ್ತು. ಇಬ್ಬರ ನಡುವೆ ಜಿಲ್ಲೆಯಲ್ಲಿ ಎರಡು ಬಣಗಳೇ ಇದ್ದು ಈ ವಿಚಾರ ದೊಡ್ಡ ಸದ್ದು ಮಾಡಿತ್ತು. ಸದ್ಯ ಇಬ್ಬರು ಶತ್ರುತ್ವ ಮರೆತು ಮಿತ್ರರಾಗಿದ್ದು ಶುಕ್ರವಾರ ತಾಲೂಕಿನ ವಿವಿಧೆಡೆ ನಿವೇದಿತ್ ಆಳ್ವಾ ಪರ ಮತಯಾಚನೆ ಮಾಡಿದರು.
ನಿವೇದಿತ್ ಆಳ್ವಾ ಯುವಕನಿದ್ದು ಕ್ಷೇತ್ರದ ಚಿತ್ರಣವೇ ಬದಲಿಸುವ ಸಾಮರ್ಥ್ಯ ಹೊಂದಿದ ಅಭ್ಯರ್ಥಿ. ಈ ಬಾರಿ ಕ್ಷೇತ್ರದ ಮತದಾರರು ನಿವೇದಿತ್ ಆಳ್ವಾ ಕೈ ಹಿಡಿಯುವಂತೆ ಮನವಿ ಮಾಡಿಕೊಂಡಿರು. ಇನ್ನು ತನ್ನ ಮಗ ನಿವೇದಿತ್ ಪರ ದೇಶಪಾಂಡೆ ಪ್ರಚಾರಕ್ಕೆ ಆಗಮಿಸಿದ್ದಕ್ಕೆ ಮಾರ್ಗರೇಟ್ ಆಳ್ವಾ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top