Slide
Slide
Slide
previous arrow
next arrow

ಬಂಜಾರಾ ಸಮುದಾಯದ ನನಗೆ ಸಾಕಷ್ಟು ಸಹಕಾರ ನೀಡಿದೆ: ಶಿವರಾಮ ಹೆಬ್ಬಾರ್

300x250 AD

ಮುಂಡಗೋಡ: ಇಡೀ ದೇಶದಲ್ಲಿ ಬಂಜಾರಾ ಸಮುದಾಯವಿದೆ. ಬಂಜಾರಾ ಸಮಾಜ ನನಗೆ ಸಾಕಷ್ಟು ಸಹಕಾರ ನೀಡಿದೆ. ಊಹಾಪೋಹಗಳಿಗೆ ಇಂದೇ ತೆರೆಯೆಳೆಯುತ್ತಿದ್ದೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಸರ್ಕಾರ ಬರಲಿ ಬಂಜಾರಾ ಮತ್ತು ಭೋವಿ ಸಮಾಜಗಳನ್ನು ಎಸ್.ಸಿ. ಮೀಸಲಾತಿಯಿಂದ ತೆಗೆಯಲು ಸಾಧ್ಯವಿಲ್ಲ ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ರಾಷ್ಟ್ರಪತಿಗಳ ಅಂಕಿತವಿದೆ. ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿಯೇ ತಮ್ಯಾನಕೊಪ್ಪ ಅತಿ ಹೆಚ್ಚು ಮತಗಳನ್ನು ನೀಡಿದ ಬೂತ್ ಆಗಿದೆ. ಇದು ನನಗೆ ವೈಯಕ್ತಿಕವಾಗಿ ಬೆಂಬಲ ನೀಡಿರುವ ಬೂತ್. ಅವರಿಗೆ ಎಂದೂ ನಾನು ಅನ್ಯಾಯ ಮಾಡಿಲ್ಲ. ಅವರಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಅವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಈ ಭಾಗದಲ್ಲಿ ಶೇ 95ರಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಬೇಕು ಎಂದರು.
ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿದರು. ಈ ವೇಳೆ ಪ್ರದೀಪ ಚವಾಣ, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಸಂತೋಷ ರಾಠೋಡ, ಸುರೇಶ ರಾಠೋಡ, ಲಕ್ಷö್ಮಣ ಮಾನು ರಾಠೋಡ, ರಾಮಚಂದ್ರ ರಾಠೋಡ, ಲಕ್ಷ್ಮಣ ಪವಾರ, ಸುನೀಲ ರಾಠೋಡ ಹಾಗೂ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top