• Slide
    Slide
    Slide
    previous arrow
    next arrow
  • ಶಂಕರಾಚಾರ್ಯರ ಜಯಂತಿ ಆಚರಣೆ

    300x250 AD

    ದಾಂಡೇಲಿ: ನಗರದಲ್ಲಿರುವ ತಾಲ್ಲೂಕು ಕಚೇರಿಯಲ್ಲಿ ಜಗದ್ಗುರು ಶ್ರೀ.ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಜಗದ್ಗುರು ಶ್ರೀಶಂಕರಾಚಾರ್ಯರ ಭಾವಚಿತ್ರಕ್ಕೆ ಆರತಿ ಬೆಳಗಿ, ಪೂಜೆ ಸಲ್ಲಿಸಲಾಯಿತು.

    ಆನಂತರ ಮಾತನಾಡಿದ ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಭಾರತೀಯ ಪ್ರಜ್ಞಾಪರಂಪರೆಯಲ್ಲಿ ಶಿಖರಪ್ರಾಯವಾಗಿ ಕಾಣಿಸಿಕೊಂಡವರು ಜಗದ್ಗುರು ಶಂಕರಾಚಾರ್ಯರು. ಭಾರತೀಯ ಚಿಂತನೆಯ ಮೂಲವೆನಿಸಿರುವ ವೇದಗಳ ಸಾರ ಏನು ಎಂಬುವುದನ್ನು ಅವರು ಪ್ರತಿಪ್ರಾದಿಸಿದವರಾಗಿದ್ದರು. ವೇದಗಳ ಸಾರ ಉಪನಿಷತ್ತುಗಳು, ಆ ಉಪನಿಷತ್ತುಗಳ ಸಾರ ಆತ್ಮಜ್ಞಾನ, ಆತ್ಮಜ್ಞಾನವೇ ವೇದಾಂತದ ತಿರುಳು ಎಂಬುವುದನ್ನು ಎತ್ತಿ ಹಿಡಿದು ಜಗತ್ತಿಗೆ ಸಾರಿಗೆ ಪುಣ್ಯ ಪುರುಷ ಶ್ರೀಶಂಕರಾಚಾರ್ಯರು ಎಂದರು.

    300x250 AD

    ಈ ಸಂದರ್ಭದಲ್ಲಿ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ಬಂಗೂರನಗರ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕರಾದ ಎನ್.ವಿ.ಪಾಟೀಲ್,ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್, ತಹಶೀಲ್ದಾರ್ ಕಚೇರಿಯ ಗೌಡಪ್ಪ ಬನಕದಿನ್ನಿ, ದೀಪಾಲಿ ಪೆಡ್ನೇಕರ್, ದಯಾನಂದ ಚಿಟ್ಟಿ, ರವಿ ಕಮ್ಮಾರ್, ಅರ್ಜುನ್, ರಾಮಣ್ಣ, ಪ್ರಾನ್ಸಿಸ್, ಸೌದಾಗಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top