Slide
Slide
Slide
previous arrow
next arrow

ಸ್ಕೂಬಾ ಡೈವ್ ಮೂಲಕ ಮತದಾನ ಜಾಗೃತಿ

300x250 AD

ಭಟ್ಕಳ: ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮತದಾನದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮದಡಿ ನೇತ್ರಾಣಿ ನಡುಗುಡ್ಡೆಯಲ್ಲಿ ನಡೆಸಿ ಗಮನ ಸೆಳೆಯಲಾಯಿತು.

ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಮಾವಳ್ಳಿ-1 ಹಾಗೂ ಮಾವಳ್ಳಿ-2 ಗ್ರಾಮ ಪಂಚಾಯತ ಮತ್ತು ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್‌ರವರ ಸಹಯೋಗದಲ್ಲಿ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಕಾರ್ಯಕ್ರಮ ಆರಂಭಗೊOಡಿತು. ಸ್ಥಳೀಯರು ಮತ್ತು ಕಛೇರಿ ಸಿಬ್ಬಂದಿಗಳೊOದಿಗೆ ನೇತ್ರಾಣಿ ನಡುಗುಡ್ಡೆಗೆ ತೆರಳಿ, ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಲ್ಲಿನ ಅಮೂಲ್ಯ, ಅಪರೂಪದ ಹವಳ, ಜಲ-ಚರಗಳ ನಡುವೆ ಜಾಗೃತಿ ಭಿತ್ತಿ ಪತ್ರ ಪ್ರದರ್ಶಿಸಿ ಗಮನ ಸೆಳೆಯಲಾಯಿತು.

300x250 AD

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನ್ಮನೆ, ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಗ್ರಾಮ ಪಂಚಾಯತ ಕಾರ್ಯದರ್ಶಿ ಮಾರುತಿ ದೇವಾಡಿಗ ಹಾಗೂ ಸಿಬ್ಬಂದಿಗಳು, ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್ ಸಿಬ್ಬಂದಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top