• Slide
    Slide
    Slide
    previous arrow
    next arrow
  • ಮರಕ್ಕೆ ಡಿಕ್ಕಿ ಹೊಡೆದ ಲಾರಿ: ಚಾಲಕನ ದುರ್ಮರಣ

    300x250 AD

    ಅಂಕೋಲಾ: ಮಹಾರಾಷ್ಟ್ರದಿಂದ ಹಣ್ಣುಗಳನ್ನು ತುಂಬಿಕೊಂಡು ಕೇರಳದ ಕೊಚ್ಚಿಗೆ ಸಾಗುತ್ತಿದ್ದ ಈಚರ್ ವಾಹನವೊಂದು ರಾ.ಹೆ 63 ಕೊಡ್ಲಗದ್ದೆ ಬಳಿ ದಾರಿ ಮಧ್ಯೆ ಉರುಳಿ ಮರಕ್ಕೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಹಣ್ಣುಗಳನ್ನು ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಹೆದ್ದಾರಿ ಅಂಚಿನ ಮರಕ್ಕೆ ಬಡಿದಿದೆ. ಪರಿಣಾಮವಾಗಿ ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ವಾಹನದಲ್ಲಿದ್ದ ಹಣ್ಣಿನ ಪೆಟ್ಟಿಗೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

    ಅಪಘಾತಗೊಂಡ ಲಾರಿ ಮತ್ತು ಮರದ ಮಧ್ಯೆ ಚಾಲಕ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕನ ಮೃತ ದೇಹ ಹೊರತೆಗೆಯಲು ಕ್ರೇನ್ ಬಳಸಿ ಹರಸಾಹಸ ಪಡುವಂತಾಯಿತು.

    300x250 AD

    ಅಂಕೋಲಾ ಸಿಪಿಐ ಜಾಕ್ಸನ್ ಡಿಸೋಜ, ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಸ್ಥಳ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top