Slide
Slide
Slide
previous arrow
next arrow

ವಿಜೃಂಭಣೆಯಿಂದ ನೆರವೇರಿದ ಸೋಮಸಾಗರ ರಥೋತ್ಸವ

300x250 AD

ಶಿರಸಿ: ತಾಲೂಕಿನ ಶಕ್ತಿಪೀಠಗಳಲ್ಲೊಂದಾದ ಸೋಮಸಾಗರದ ಶ್ರೀ ಸೋಮೇಶ್ವರ ದೇವರ ರಥೋತ್ಸವವು ಶ್ರೀ ದೇವಾಲಯದ ರಥಬೀದಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀದೇವರಿಗೆ ಎಲ್ಲ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರದಲ್ಲಿ ಕರೂರು ಸೀಮಾ ಭಾಗದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಗ್ರಾಮಸ್ಥರೆಲ್ಲರೂ ಜೊತೆಗೂಡಿ ಸೋಮೇಶ್ವರ ದೇವರ ರಥವನ್ನು ಭಕ್ತಿಯಿಂದ ಎಳೆಯುವುದರ ಮೂಲಕ ತೇರು ಸಾಂಗವಾಗಿ ಸಾಗಿತು.

300x250 AD

ಸುತ್ತಮುತ್ತಲಿನ ಅನೇಕ ಊರುಗಳಿಂದ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀದೇವರ ದರ್ಶನ ಪಡೆದು ಪುನೀತರಾದರು. ಈ ವೇಳೆ ವೈದಿಕರು, ದೇವಸ್ಥಾನದ ಮೊಕ್ತೇಸರರಾದ ಮಹೇಂದ್ರ ಹೆಗಡೆ ಮುಳಖಂಡ, ಶ್ರೀ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಗ್ರಾಮದ ಹಿರಿಯರು ಸೇರಿದಂತೆ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top