Slide
Slide
Slide
previous arrow
next arrow

ಟಿ.ಎಸ್.ಎಸ್.ಬಂಗಾರ ಖರೀದಿಯ ಲಕ್ಕಿ ಡ್ರಾ ವಿಜೇತರ ಆಯ್ಕೆ

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಪ್ರಧಾನ ಕಛೇರಿಯ ಬಂಗಾರದ ಮಳಿಗೆ ವಿಭಾಗದಲ್ಲಿ ರೂ.10,000 ಮೇಲ್ಪಟ್ಟ ಬಂಗಾರದ ಆಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ನೀಡಲಾಗಿದ್ದ ಕೂಪನ್‌ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ವಿಜೇತರುಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ಟಿಎಸ್ಎಸ್ ಪ್ರಧಾನ ಕಛೇರಿಯ ಬಂಗಾರದ ಮಳಿಗೆ ವಿಭಾಗದಲ್ಲಿ ನಡೆಸಲಾಯಿತು.

ಪ್ರಥಮ ಬಹುಮಾನವಾದ ರೂ.1,00,000/- ವರೆಗೆ ನಗದು ವಿಜೇತರಾಗಿ ರಾಜು ಎಮ್. ಪೂಜಾರಿ, ದ್ವಿತೀಯ ಬಹುಮಾನ ರೂ.50,000/- ವರೆಗೆ ನಗದು ವಿಜೇತರಾಗಿ ನಾಲ್ಕು ಜನ ಗ್ರಾಹಕರು, ತೃತೀಯ ಬಹುಮಾನ ರೂ.20,000/- ವರೆಗೆ ನಗದು ವಿಜೇತರಾಗಿ ಐದು ಜನ ಗ್ರಾಹಕರು, ಹಾಗೂ ಚತುರ್ಥ ಬಹುಮಾನ ರೂ.10,000/- ವರೆಗೆ ನಗದು ವಿಜೇತರಾಗಿ ಹತ್ತು ಜನ ಗ್ರಾಹಕರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಸಂಘದ ಆಡಳಿತ ಮಂಡಳಿ ಸದಸ್ಯರುಗಳು, ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳು , ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top