Slide
Slide
Slide
previous arrow
next arrow

ನಿವೃತ್ತ ನೌಕರರ ಸಂಘದ ಕಟ್ಟಡದ ಮೊದಲ ಅಂತಸ್ತಿಗೆ ಶಂಕುಸ್ಥಾಪನೆ

300x250 AD

ಕಾರವಾರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ನೌಕರರ ಸಂಘದ ಜಿಲ್ಲಾ ಕಚೇರಿಯ ಕಟ್ಟಡದ ಮೊದಲ ಅಂತಸ್ತಿನ ಮೇಲೆ ಸಭಾಭವನ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಸಂಘದ ಕಟ್ಟಡದ ಸಮಿತಿಯ ಅಧ್ಯಕ್ಷ ಶಿವಾನಂದ ಕದಂರವರು ಕಟ್ಟಡ ಶಿಲಾನ್ಯಾಸ ಕಾರ್ಯದ ಪೂಜಾ ವಿಧಾನಗಳನ್ನು ನೆರವೇರಿಸಿದರು.

ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ಹೆಗಡೆ, ಕೇಂದ್ರ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹಾಗೂ ಕುಮಟಾ ತಾಲೂಕಿನ ಸಂಘದ ಅಧ್ಯಕ್ಷ ಎಸ್.ಐ.ನಾಯ್ಕ್ ಮತ್ತು ಕಟ್ಟಡ ಸಮಿತಿಯ ಅಧ್ಯಕ್ಷ ಶಿವಾನಂದ ಡಿ.ಕದಂ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಎಲ್.ನಾಯ್ಕ್, ಖಜಾಂಚಿ ವಿ.ಆರ್.ರಾಣಿ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಹಾಜರಿದ್ದರು. ಕಟ್ಟಡ ಕಟ್ಟಲು ಧನಸಹಾಯ ಮಾಡಿದ ದಾನಿಗಳು, ಕಟ್ಟಡದ ಇಂಜಿನಿಯರ್ ಸಮೀರ್ ನಾಯಕ, ಜೈ ರಾಜ್ ಸಹ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

300x250 AD

Share This
300x250 AD
300x250 AD
300x250 AD
Back to top