Slide
Slide
Slide
previous arrow
next arrow

ಲಕ್ಷಾಂತರ ರೂ.ಹಣ, ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿದ ಆಟೋ ಚಾಲಕ

300x250 AD

ಕುಮಟಾ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣವಿರುವ ಬ್ಯಾಗ್ ಅನ್ನು ಕಳೆದುಕೊಂಡ ಪ್ರಯಾಣಿಕರಿಗೆ ಆಟೋ ಚಾಲಕರೊಬ್ಬರು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಗ್ಗೋಣದ ವಾಸುದೇವ ಜಟ್ಟಿ ನಾಯ್ಕ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಮೂಲತಃ ರಾಜಸ್ಥಾನದವರಾದ ಗಂಗಾ ಮತ್ತು ರಮೇಶ ಪುರೋಹಿತ್ ದಂಪತಿಯು ರಾಜಸ್ಥಾನದಿಂದ ಕುಮಟಾಕ್ಕೆ ರೈಲ್ಲಿನಲ್ಲಿ ಆಗಮಿಸಿದ್ದರು. ರೈಲು ಇಳಿದು ಮನೆಗೆ ತೆರಳುವಾಗ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣವಿರುವ ಬ್ಯಾಗ್ ಅನ್ನು ಗಮನಿಸದೇ ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಆಟೋ ಚಾಲಕ ವಾಸುದೇವ ಅವರು ಆ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು. ಬ್ಯಾಗ್ ಪರಿಶೀಲಿಸಿದ ರೈಲ್ವೆ ಪೊಲೀಸರಿಗೆ ಅದರಲ್ಲಿ 1.36 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನಾಭರಣ ಇರುವುದು ಕಂಡುಬಂದಿದೆ. ಆ ಬ್ಯಾಗ್ ಅನ್ನು ತಕ್ಷಣ ಕುಮಟಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top