Slide
Slide
Slide
previous arrow
next arrow

ಸ್ಪೀಕರ್ ಕಾಗೇರಿಯಿಂದ ವಿವಿಧ ಕಾಮಗಾರಿಗೆ ಚಾಲನೆ

300x250 AD

ಸಿದ್ದಾಪುರ: ತಾಲೂಕಿನ ಕ್ಯಾದಗಿ ಪಂಚಾಯತ ವ್ಯಾಪ್ತಿಯ ನೂತನವಾಗಿ ನಿರ್ಮಿಸಿದ ಅಳ್ಳಿಮಕಿ ಬಸ್ ತಂಗುದಾಣ ಹಾಗೂ ವಂದಾನೆ ಬಸ್ ತಂಗುದಾಣಗಳ ಉದ್ಘಾಟನೆ ಹಾಗೂ ರೂ.25 ಲಕ್ಷಗಳ ಅನುದಾನದ ಬಾಳೆಜಡ್ಡಿ ರಸ್ತೆ ಕಾಮಗಾರಿಯ ಉದ್ಘಾಟನೆ ಮತ್ತು ರೂ.85 ಲಕ್ಷಗಳ ಅನುದಾನದ ಮಾವಿನಕೋಡು ಕಾರೇಸಾಲು ಹೊಳೆಗೆ ಸೇತುವೆ ಸಹಿತ ಕಿಂಡಿ ಆಣೆಕಟ್ಟು ನಿರ್ಮಾಣ ಕಾಮಗಾರಿಯ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿ.

ರೂ.25 ಲಕ್ಷಗಳ ಕತ್ರಗಾಲ ಊರೊಳಗಿನ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರೇಣುಕಾ ಗೌಡ, ಉಪಾಧ್ಯಕ್ಷರಾದ ಎಸ್.ಎನ್.ಹೆಗಡೆ ಸದಸ್ಯರಾದ ರಾಜಾರಾಮ ನಾಯ್ಕ, ದತ್ತಾತ್ರೆಯ ಭಟ್ಟ, ವೀಣಾ ಹಸ್ಲರ್ ಪ್ರಮುಖರಾದ ಮಾರುತಿ ನಾಯ್ಕ, ತಿಮ್ಮಪ್ಪ ಮಡಿವಾಳ, ರವಿ ಭಟ್ಟ ಕಲ್ಲಾಳ, ಬಿ.ಎನ್.ನಾಯ್ಕ ಶಿರೂರು, ಲೋಕೇಶ ನಾಯ್ಕ ಕಸಗೋಡ, ದಿವಾಕ ನಾಯ್ಕ ಬಾಳೆಜಡ್ಡಿ, ಎಸ್.ಆರ್ ನಾಯ್ಕ, ಗಣಪತಿ ನಾಯ್ಕ ಕಸಗೋಡ,ವಿ.ಟಿ.ನಾಯ್ಕ ಕಿರೇಕೋಡ, ಆದರ್ಶ ಪೈ, ಶಾಂತಕುಮಾರ ಭಟ್ಟ, ಬೀರ ಗೌಡ, ಎಇಇ ಕುಶುಮಾ ಹೆಗಡೆ, ಪಿಡಿಒ ಶಿಲ್ಪಾ ನಾಯ್ಕ ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top