• Slide
    Slide
    Slide
    previous arrow
    next arrow
  • ಚರಸ್ ಮಾರಾಟಕ್ಕೆ ಯತ್ನ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ

    300x250 AD

    ಕುಮಟಾ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾದಕ ವಸ್ತುವನ್ನ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಗೋಕರ್ಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕರ್ಣದ ಬೇಲೆಹಿತ್ತಲ ನಿವಾಸಿ ತುಳುಸು ಗೌಡ, ಮೂಲೇಕೇರಿ ನಿವಾಸಿ ಶ್ರೀಧರ ಗೌಡ ಹಾಗೂ ಕುಡ್ಲೆ ನಿವಾಸಿ ಸಂತ ಬದ್ದೂರ್ ಬಂಧಿತ ಆರೋಪಿಗಳಾಗಿದ್ದಾರೆ.
    ಈ ಮೂವರು ಓಂ ಬೀಚ್ ರಸ್ತೆಯಲ್ಲಿ ಮಾದಕ ವಸ್ತು ಚರಸ್ ಇರಿಸಿಕೊಂಡು ವಿದೇಶಿಗರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಸಿಪಿಐ ಮಂಜುನಾಥ ಎಂ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆರೋಪಿಗಳ ಬಳಿಯಿದ್ದ ಸುಮಾರು 10 ಲಕ್ಷ ಮೌಲ್ಯದ 1 ಕೆಜಿ 648 ಗ್ರಾಂ ಚರಸ್‌ನ್ನು ಜಪ್ತು ಮಾಡಿದ್ದಾರೆ.
    ಈ ಸಂಬoಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಹರೀಶ್ ಎಚ್, ಪಿ.ಎಸ್.ಐ ಸಕ್ತಿ ವೇಲು, ಸಿಬ್ಬಂದಿಗಳಾದ ರಾಜೇಶ ನಾಯ್ಕ, ಅರವಿಂದ ಶೆಟ್ಟಿ ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top