Slide
Slide
Slide
previous arrow
next arrow

ಭಟ್ಕಳ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಲು ಚರ್ಚೆ

300x250 AD

ಭಟ್ಕಳ: ತಾಲೂಕಿನಲ್ಲಿ ನಾಮಧಾರಿ ಸಮಾಜದವರನ್ನ ಹೊರತುಪಡಿಸಿದರೆ ಎರಡನೇ ಸ್ಥಾನದಲ್ಲಿ, ಅಂದರೆ ಸುಮಾರು 55 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರ ಮತದಾರರಿದ್ದಾರೆ. ಈ ಬಾರಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
ಈ ಹಿಂದೆ ಪಟ್ಟಣದಲ್ಲಿ ಶಾಸಕರಾಗಿ ಆಯ್ಕೆಯಾದ ದಿ.ಜುಕಾಕೋ ಶಂಸುದ್ದೀನ್, ಎಸ್.ಎಂ.ಯಾಹ್ಯ ರಾಜ್ಯ ರಾಜಕೀಯದಲ್ಲಿ ಮಿಂಚಿದ್ದರು. ಇವರಿಬ್ಬರೂ ಮುತ್ಸದ್ದಿ ಆಡಳಿತಗಾರರಾಗಿ ಬಹಳ ಜನಪ್ರಿಯತೆ ಗಳಿಸಿದ್ದರು. ಆ ನಂತರ ಕಳೆದ ನಾಲ್ಕು ದಶಕಗಳಿಂದ ಯಾವುದೇ ಅಲ್ಪಸಂಖ್ಯಾತ ಅಭ್ಯರ್ಥಿ ಇಲ್ಲಿಂದ ವಿಧಾನಸಭೆ ಪ್ರವೇಶಿಸಿಲ್ಲ. ತಮ್ಮ ಸಮುದಾಯದ ಇಷ್ಟೊಂದು ದೊಡ್ಡ ಸಂಖ್ಯೆಯ ಮತಗಳ ಹೊರತಾಗಿಯೂ ಶಾಸನ ಸಭೆಗೆ ಇಲ್ಲಿಂದ ಪ್ರತಿನಿಧಿ ಕಳಿಸಲಾಗುತ್ತಿಲ್ಲ. ಈ ಬಾರಿ ಎಲ್ಲ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸಿ ಯಾಕೆ ಗೆಲ್ಲಿಸಬಾರದು ಎಂಬುವುದು ಇಲ್ಲಿನ ಮುಸ್ಲಿಂರ ನಡುವೆ ಸದ್ಯ ನಡೆಯುತ್ತಿರುವ ಚರ್ಚೆಯಾಗಿದೆ.
ಈ ಕುರಿತು ವಾಟ್ಸಪ್ ಗ್ರೂಪ್‌ಗಳು, ಫೇಸ್‌ಬುಕ್ ಪೇಜ್‌ಗಳಲ್ಲಿ ಚರ್ಚೆ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ರಾಜಕೀಯ, ಧಾರ್ಮಿಕ ಹಾಗೂ ಮುಸ್ಲಿಮರ ಪ್ರಮುಖ ಸಂಘಟನೆ ತಂಜೀಮ್‌ನ ಮುಖಂಡರು ಹಾಗೂ ಗಲ್ಫ್ನಲ್ಲಿರುವ ಅನಿವಾಸಿ ಭಟ್ಕಳಿಗರು ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಬಾರಿಯಾದರು ಮುಸ್ಲಿಂ ಸಮುದಾಯದ ಪ್ರತಿನಿಧಿ ಇಲ್ಲಿಂದ ವಿಧಾನಸಭೆಗೆ ಹೋಗಬೇಕು ಎಂಬುದು ಈ ಚರ್ಚೆಗಳ ಕೇಂದ್ರ ವಿಷಯ ಹಾಗೂ ಆಗ್ರಹವು ಸಹ ಆಗಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 2 ಲಕ್ಷಕ್ಕಿಂತ ಹೆಚ್ಚಿದ್ದು, ಅದರಲ್ಲಿ ನಾಮಧಾರಿ (ನಾಯ್ಕ) ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ, ಸುಮಾರು 65 ಸಾವಿರ ನಾಮಧಾರಿ ಮತದಾರರು ಮತ್ತು 55 ಸಾವಿರ ಮುಸ್ಲಿಂ ಮತದಾರರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ನಂತರ ಎಸ್‌ಸಿ/ಎಸ್‌ಟಿ, ಮೊಗೇರ, ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ, ದೇವಾಡಿಗ, ಕ್ರಿಶ್ಚಿಯನ್ ಮತ್ತು ಇತರ ಜಾತಿಗಳ ಮತದಾರರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top