• Slide
    Slide
    Slide
    previous arrow
    next arrow
  • ಸಮಾಜಮುಖಿ ಕೆಲಸಗಾರ ವಿಶ್ವೇಶ್ವರ ಹೆಗಡೆ ನಿಧನ: ಸಂತಾಪ

    300x250 AD

    ಸಿದ್ದಾಪುರ: ತಾಲೂಕಿನ ಹನುಮಾವಿನಜಡ್ಡಿಯ (ಕಲಗದ್ದೆ) ನಿವಾಸಿಯಾದ ವಿಶ್ವೇಶ್ವರ ಗಣಪತಿ ಹೆಗಡೆ (ಜನನ: 29-09-1962 ಮರಣ: 09-03-2023) ಮಾ.9 ರಂದು ಆಕಸ್ಮಿಕ ಹೃದಯಾಘಾತದಿಂದ ಮರಣ ಹೊಂದಿದರು.

    ಉತ್ತಮ ಕೃಷಿಕ ಹಾಗೂ ಸಮಾಜಮುಖಿ ಕೆಲಸಗಾರರಾಗಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಿಶ್ವೇಶ್ವರ ಗಣಪತಿ ಹೆಗಡೆ ಅವರ ಮರಣ ಅನೀರಿಕ್ಷಿತವಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಭಗವಂತ ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಹಾಗೂ ಕಾಂಗ್ರೆಸ್‌ ಮುಖಂಡರಾದ ವೆಂಕಟೇಶ ಹೆಗಡೆ ಹೊಸಬಾಳೆ ಇವರು ಸಂತಾಪ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top