Slide
Slide
Slide
previous arrow
next arrow

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ತಪ್ಪಿದ‌ ಭಾರೀ ದುರಂತ

300x250 AD

ಹೊನ್ನಾವರ: ಪಟ್ಟಣದ ಮೂರುಕಟ್ಟೆ ಸಮೀಪ ಚಲಿಸುತ್ತಿದ್ದ ಡಸ್ಟರ್ ಕಾರ್ ಒಂದರ ಎಂಜಿನ್’ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಹೊನ್ನಾವರದಿಂದ ಚಿಕ್ಕೊಳ್ಳಿಗೆ ಹೋಗುವಾಗ ಪ್ರಭಾತನಗರದ ಮೂರುಕಟ್ಟೆ ಬಳಿ ಈ ಘಟನೆ ನಡೆದಿದ್ದು, ಚಿಕ್ಕೊಳ್ಳಿಯ ಜಗದೀಶ ಗೌಡ ಎಂಬುವರ ಕಾರು ಎಂದು ತಿಳಿದುಬಂದಿದೆ. ಜಗದೀಶ ಹಾಗೂ ಅವರ ಸ್ನೇಹಿತರು ಹೊನ್ನಾವರದಿಂದ ಚಿಕ್ಕೊಳ್ಳಿಗೆ ಹೋಗುವಾಗ ಪ್ರಭಾತನಗರದ ಶಿವಸಾಗರ ರೆಸಿಡೆನ್ಸಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕಾರ್ ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಏಕಾಏಕಿ ಬೆಂಕಿ ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಅಗತ್ಯ ಕಾಗದ ಪತ್ರಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಕಾರಿನಿಂದ ಹೊರಬಂದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

300x250 AD

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಬೆಂಕಿ ನಂದಿಸಲು ಪ್ರಯತ್ನಿಸಿ‌, ನೀರು ಸಿಗದೆ ಪರದಾಡಿದರು. ನಂತರ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿದರು.

Share This
300x250 AD
300x250 AD
300x250 AD
Back to top