Slide
Slide
Slide
previous arrow
next arrow

ಬಾಮನವಾಡಿ ಗ್ರಾಮದಲ್ಲಿ ತೋಟಕ್ಕೆ ಬೆಂಕಿ; ಬೆಳೆ ನಾಶ

300x250 AD

ಜೊಯಿಡಾ: ತಾಲೂಕಿನ ಜಗಲಬೇಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಮನವಾಡಿಯಲ್ಲಿ ಸಾಧಿಕ್ ಅಲಿ ಖಾನ್ ಎನ್ನುವವರ ತೋಟಕ್ಕೆ ಬೆಂಕಿ ತಗುಲಿ ಎರಡು ಎಕರೆ ಅಡಿಕೆ, ಬಾಳೆ, ತೆಂಗು ಗಿಡಗಳಿಗೆ ಹಾನಿಯಾದ ಘಟನೆ ನಡೆದಿದೆ.

ಬಾಮನವಾಡಿಯ ಸರ್ವೆ ನಂ.12ರಲ್ಲಿ ಎರಡು ಎಕರೆ ಜಮೀನು ಇದ್ದು, ಅರಣ್ಯ ಪಕ್ಕದಲ್ಲಿಯೇ ತೋಟವಿದ್ದ ಕಾರಣ ಅರಣ್ಯದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಬೆಂಕಿ ಆವರಿಸಿ ತೋಟಕ್ಕೆ ಬಂದಿದೆ ಹೆಚ್ಚಿನ ಗಾಳಿ ಬಿಸಿದ ಕಾರಣ ಸಂಪೂರ್ಣ ತೋಟ ಬೆಂಕಿಗೆ ಆಹುತಿಯಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಗೆ ಹಾಗೂ ತಹಶಿಲ್ದಾರರ ಕಚೇರಿಗೆ ತೋಟದ ಮಾಲಿಕರು ಮನವಿ ನೀಡಿದ್ದು, ಆದ ನಷ್ಟವನ್ನು ಸರ್ಕಾರದಿಂದ ಬರಿಸಿಕೊಡಬೇಕು ಎಂದು ರೈತ ಸಾಧಿಕ ಖಾನ್ ಮನವಿ ಮಾಡಿದ್ದಾರೆ.
ಬೇಸಿಗೆ ಕಾಲವಾದ್ದರಿಂದ ಅರಣ್ಯದಲ್ಲಿ ಹೆಚ್ಚಾಗಿ ಬೆಂಕಿ ಕಾಣಿಸುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಬೆಂಕಿ ಬಿಳದಂತೆ ನಿಗಾ ವಹಿಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top