Slide
Slide
Slide
previous arrow
next arrow

ಕೊಲೆ ಪ್ರಕರಣ: ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆ

300x250 AD

ಭಟ್ಕಳ: ತಾಲೂಕಿನ ಹಾಡುವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಸಂಬಂಧಿಯಿಂದಲೇ ಹತ್ಯೆಗೊಳಗಾಗಿದ್ದ ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆಯು ಫೆ.27, ಸೋಮವಾರದಂದು ನೆರವೇರಿತು.

ಅಂತ್ಯ ಸಂಸ್ಕಾರಕ್ಕೂ ಮುನ್ನ ಮನೆಯ ಆವರಣದಲ್ಲಿ ನಾಲ್ವರ ಶವಗಳನ್ನೂ ಇರಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ವೇಳೆ ಮೃತ ರಾಘವೇಂದ್ರ, ಕುಸುಮಾ ದಂಪತಿಯ ಮಗ ಹಾಗೂ ಮಗಳ ಕಡೆಯಿಂದಲೂ ವಿಧಿವಿಧಾನಗಳನ್ನು ಪೂರೈಸಲಾಯಿತು.

300x250 AD

ಶಂಭು ಭಟ್ ಅವರ ಗಂಡು ಮಕ್ಕಳಿಬ್ಬರೂ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ರಕ್ತ ಸಂಬಂಧಿಯೊಬ್ಬರು ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಶಂಭು ಭಟ್ ಅವರ ಪುತ್ರಿ ಜಯಾ ಅಡಿಗ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಭಾಗಿಯಾದರು. ಶಂಭು ಭಟ್ ಅವರ 5 ವರ್ಷದ ಮೊಮ್ಮಗಳು ಹಾಗೂ 4 ವರ್ಷದ ಮೊಮ್ಮಗ ಮೃತದೇಹಗಳನ್ನು ಕಂಡು ಕಣ್ಣೀರಿಟ್ಟಿದ್ದು ಮನಕಲಕುವಂತಿತ್ತು.

Share This
300x250 AD
300x250 AD
300x250 AD
Back to top