Slide
Slide
Slide
previous arrow
next arrow

ಇಂದು ಭೈರುಂಬೆಯಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ

300x250 AD

ಶಿರಸಿ: ತಾಲೂಕಿನ ಭೈರುಂಬೆಯ ಶ್ರೀಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹುಳಗೋಳ ಸೇವಾ ಸಹಕಾರಿ‌ಸಂಘದ ಸಹಕಾರದಲ್ಲಿ ಫೆ.27,ಸೋಮವಾರ ಸಂಜೆ 6ರಿಂದ ಶ್ರೀಮತಿ ಅನ್ನಪೂರ್ಣ ಭಟ್ಟ, ಗಡಿಗೆಹೊಳೆ  ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಗಜಾನನ ಭಟ್ಟ, ತುಳಗೇರಿ, ಮೃದಂಗದಲ್ಲಿ ಶ್ರೀಪಾದ ಭಟ್ಟ, ಮೂಡಗಾರು, ಚಂಡೆಯಲ್ಲಿ ಉಮೇಶ ಹೆಗಡೆ, ಹಲಸಿನಕೊಪ್ಪ, ವಸ್ತ್ರ ವಿನ್ಯಾಸದಲ್ಲಿ ಉಮೇಶ ಹೆಗಡೆ, ಹಲಸಿನಕೊಪ್ಪ & ಸಂಗಡಿಗರು ಸಹಕರಿಸಲಿದ್ದಾರೆ.

300x250 AD

ಮುಮ್ಮೇಳದಲ್ಲಿ ಕುಮಾರಿ ಕೀರ್ತಿ ಹೆಗಡೆ, ಕುಮಾರಿ ಭಾವನಾ ಹೆಗಡೆ, ಕುಮಾರಿ ಪ್ರಾರ್ಥನಾ ಹೆಗಡೆ, ಕುಮಾರಿ ಮೈತ್ರೇಯಿ ಹೆಗಡೆ, ಕುಮಾರಿ ಸಾರಿಕಾ ಭಟ್, ಕುಮಾರ ಪವನ ಭಾಗ್ವತ, ಕುಮಾರ ಮಧುಸೂದನ ಹೆಗಡೆ‌ ಕಾಣಿಸಿಕೊಳ್ಳಲಿದ್ದು, ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ‌ ಪ್ರೋತ್ಸಾಹಿಸಲು‌ ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top