Slide
Slide
Slide
previous arrow
next arrow

ಕದಂಬೋತ್ಸವಕ್ಕೆ ನಿಗದಿತ ಸಮಯಕ್ಕಿಂತ‌ ಮೊದಲೇ ಸಿಎಂ ಆಗಮನ: ಸಚಿವ ಹೆಬ್ಬಾರ್ ಮಾಹಿತಿ

300x250 AD

ಶಿರಸಿ: ಐತಿಹಾಸಿಕ‌ ಪ್ರಸಿದ್ದ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವ ಉದ್ಘಾಟನೆಗೆ ನಿಗದಿಯಾದ ಸಮಯಕ್ಕಿಂತ ಮೊದಲೇ ಸಿಎಂ ಆಗಮಿಸಲಿದ್ದಾರೆ.

ಗುಡ್ನಾಪುರದಲ್ಲಿ ಭಾನುವಾರ ಕದಂಬ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ , ಫೆ.28ರಂದು‌ ರಥ ಸಮರ್ಪಣೆ,‌ ನೀರಾವರಿ ಯೋಜನೆಗೆ ಚಾಲನೆ, ಕದಂಬೋತ್ಸವ ಉದ್ಘಾಟನೆಗೆ ಸಂಜೆ‌ 6 ಕ್ಕೆ ಬರಬೇಕಿದ್ದ ಸಿಎಂ‌ ನಿಗದಿತ ಸಮಯಕ್ಕಿಂತ‌ ಮೊದಲೇ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಸಿಎಂ ಬನವಾಸಿಗೆ ಆಗಮಿಸಿ ನೀರಾವರಿ ಯೋಜನೆಗೆ ಚಾಲನೆ ನೀಡಿ, ದೇವರ ದರ್ಶನ ಮಾಡಿ, ರಥ ಸಮರ್ಪಿಸಿ ಕದಂಬೋತ್ಸಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

300x250 AD

ಕದಂಬೋತ್ಸವ ಕನ್ನಡಿಗರ ಸ್ವಾಭಿಮಾನ, ನೆಲ, ಜಲ ಭಾಷೆಯ ಜಾಗೃತಿಯ ಉತ್ಸವ. ಜನರೆಲ್ಲ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

Share This
300x250 AD
300x250 AD
300x250 AD
Back to top