Slide
Slide
Slide
previous arrow
next arrow

ಟಿಪ್ಪರ್ ಪಲ್ಟಿ: ಸ್ಥಳದಲ್ಲೇ ಚಾಲಕನ ದುರ್ಮರಣ

300x250 AD

ಅಂಕೋಲಾ:  ತಾಲೂಕಿನ ಹಿಲ್ಲೂರು ಪಂಚಾಯತ್ ವ್ಯಾಪ್ತಿಯ ನೆವಳಸೆ ಬಳಿ ಟಿಪ್ಪರ್ ಒಂದು ಪಲ್ಟಿಯಾಗಿ ಚಾಲಕ ದುರ್ಮರಣಕ್ಕೀಡಾದ ಘಟನೆ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಕುಮಟಾ ದಿವಗಿ ನಿವಾಸಿ ಶ್ರೀಧರ ಶಿವಪ್ಪ ದೇಶಭಂಡಾರಿ(44) ಮೃತ ದುರ್ದೈವಿ ಚಾಲಕನಾಗಿದ್ದು ಈತ ಗುಂಡಬಾಳ ಹತ್ತಿರದ ನೆವಳಸೆಯಿಂದ ಕುಮಟಾ ಕಡೆ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿ ಚಲಾಯಿಸಿ ನೆವಳಸೆ ಶಾಲೆ ಬಳಿ ಇಳಿಜಾರಿನಲ್ಲಿ ವೇಗ ನಿಯಂತ್ರಿಸಲಾಗದೇ ಟಿಪ್ಪರ್ ಪಲ್ಟಿಯಾದ ಕಾರಣ ಎಡಗೈ ಭುಜ, ಮುಖ ಮತ್ತು ಅಂಗಾಂಗಳಿಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

300x250 AD

ಅಪಘಾತದ ಸುದ್ದಿ ತಿಳಿದು ಗೋಕರ್ಣದಿಂದ ಬಂದಿದ್ದ ಖಾಸಗಿ ಅಂಬುಲೆನ್ಸ್ ಚಾಲಕ ಗಣೇಶ್ ನಾಯಕ್ ತಲಗೇರಿ ಮತ್ತಿತರರು ಅಪಘಾತದ ಸ್ಥಳದಿಂದ ಮೃತದೇಹವನ್ನು ಅಂಕೋಲಾ ತಾಲೂಕ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top