Slide
Slide
Slide
previous arrow
next arrow

ವಿರೂಪಾಕ್ಷಿಗೆ ಶ್ರೀಗುಬ್ಬಿ ನಂಜುಂಡೇಶ್ವರ ಪ್ರಶಸ್ತಿ

300x250 AD

ಮುಂಡಗೋಡ: ಪುಟ್ಟರಾಜ ಗರಡಿಯಲ್ಲಿ ಬೆಳೆದ ತಾಲೂಕಿನ ನ್ಯಾಸರ್ಗಿ ಗ್ರಾಮದ ವಿರೂಪಾಕ್ಷಿ ಸಾಗರ ಕಳೆದ ನಾಲ್ಕು ದಶಕಗಳಿಂದ ಸಾಂಸ್ಕೃತಿಕ ಕ್ಷೇತ್ರದ ರಂಗಭೂಮಿಯಲ್ಲಿ ನಿರಂತರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ 2022-23ನೇ ಸಾಲಿನ ಶ್ರೀಗುಬ್ಬಿ ನಂಜುಂಡೇಶ್ವರ ಸೇವಾರತ್ನ ಪ್ರಶಸ್ತಿ ಪ್ರದಾನಿಸಲಾಗಿದೆ.
ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅವರ ಬೆಂಡಿಗೇರಿ ನಿವಾಸದಲ್ಲಿ ನಿಕಟಪೂರ್ವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪಾಟೀಲ, ನಗರಾಧ್ಯಕ್ಷ ಆಲೆಹಸನ ಬೆಂಡಿಗೇರಿ, ಕಾರ್ಯಧ್ಯಕ್ಷ ನಾಗರಾಜ ಹಂಚಿನಮನಿ, ಡಿಸಿಸಿ ಸದಸ್ಯ ತಂಗಚನ್, ಪಕ್ಷದ ವಕ್ತಾರ ವಾದಿರಾಜ ಆಡ್ವೆ, ಯುಥ್ ಅಧ್ಯಕ್ಷ ಬಸವರಾಜ ನಡುವಿನಮನಿ, ಫಕ್ರುಸಾಬ ಬೆಂಡಿಗೇರಿ ಮುಂತಾದವರು ಸನ್ಮಾನಿಸಿ ಗೌರವಿಸಿದರು.

300x250 AD
Share This
300x250 AD
300x250 AD
300x250 AD
Back to top