ಶಿರಸಿ: ಕಲೆ, ಸಂಸ್ಕೃತಿ, ಶಿಕ್ಷಣ, ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುತ್ತ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪ್ರಜ್ವಲ ಟ್ರಸ್ಟ್ ಈಗ ಇನ್ನೊಂದು ವಿಶಿಷ್ಟ ಕಾರ್ಯಕ್ಕೆ ಮುಂದಾಗಿದೆ. ನಗರದ ಯಲ್ಲಾಪುರ ರಸ್ತೆಯಲ್ಲಿನ ಆದರ್ಶ ವನಿತಾ ಸಮಾಜದಲ್ಲಿ ರಂಗ ಕಲಾವಿದರಿಗಾಗಿ, ರಂಗ ಕಲಾಸಕ್ತರಿಗಾಗಿ ಮೂರು ದಿನಗಳ ‘ರಂಗ ಕಾರ್ಯಾಗಾರ’ವನ್ನು ಹಮ್ಮಿಕೊಂಡಿದೆ. ಜ.30 ರಿಂದ ಫೆ.1 ರವರೆಗೆ ಸಕ್ರಿಯ ರಂಗಕರ್ಮಿ ಧನುಷ್ ನಾಗ್ ರಂಗ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು,ಪದಾಧಿಕಾರಿಗಳು ಪ್ರಜ್ವಲ ಟ್ರಸ್ಟ್ 9482111131, 7338498524 ಇವರನ್ನು ಸಂಪರ್ಕಿಸಲು ಕೋರಿದೆ.
ಪ್ರಜ್ವಲ ಟ್ರಸ್ಟ್’ನಿಂದ 3 ದಿನಗಳ ರಂಗ ಕಾರ್ಯಾಗಾರ
![](https://euttarakannada.in/wp-content/uploads/2023/01/IMG-20230125-WA0012-506x438.jpg?v=1674826760)