Slide
Slide
Slide
previous arrow
next arrow

ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಲಾರೆವು: ಅರಣ್ಯ ಸಂರಕ್ಷಣಾಧಿಕಾರಿಯ ಲಿಖಿತ ಉತ್ತರ

300x250 AD

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ಪರಿಶೀಲನಾ ಪ್ರಕ್ರೀಯೆ ಪೂರ್ಣವಾಗುವವರೆಗೆ ಅರಣ್ಯವಾಸಿಯನ್ನು ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಬಾರದು ಹಾಗೂ ಅರಣ್ಯ ಒತ್ತುವರಿ ಮತ್ತು ಅರಣ್ಯವಾಸಿಯ ಪಟ್ಟಾ ಜಮೀನು ಸೇರಿ 3 ಎಕರೆಕ್ಕಿಂತ ಕಡಿಮೆ ಇರುವ ಅರಣ್ಯ ಒತ್ತುದಾರರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ ಎಂಬ ಸರಕಾರದ ಆದೇಶಕ್ಕೆ ಅರಣ್ಯ ಅಧಿಕಾರಿಗಳು ಬದ್ಧರಿದ್ದೇವೆ ಎಂದು ಅರಣ್ಯ ಇಲಾಖೆಯು ಲಿಖಿತ ಉತ್ತರವನ್ನು ನೀಡಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

 ಅವರು ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ಅವರಿಗೆ ಅಸಮರ್ಪಕ ಜಿಪಿಎಸ್ ಮಾನದಂಡದಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಅಗಳ ಹೊಡೆಯುವ ಕಾರ್ಯ ಕಾನೂನು ಬಾಹಿರ ಎಂದು ಪ್ರತಿಪಾದಿಸಿ, ಜಿಪಿಎಸ್ ಮಾನದಂಡದಡಿಯಲ್ಲಿ ಅಗಳ ತೆಗೆದು ಒಕ್ಕಲೆಬ್ಬಿಸುವ ಕಾರ್ಯದ ಮೌಲ್ಯತೆಯ ಕುರಿತು ಕಾನೂನಾತ್ಮಕ ಉತ್ತರವನ್ನ ಬಯಸಿ ಬರೆದ ಪತ್ರಕ್ಕೆ ಶಿರಸಿ ಮತ್ತು ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನೀಡಿದ ಉತ್ತರವನ್ನ ಪತ್ರಿಕೆಗೆ ಬಿಡುಗಡೆಗೊಳಿಸಿ ಹೇಳಿದರು.

 ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬಾರದೆಂಬ  ಸರಕಾರದ ಆದೇಶ ಮತ್ತು ಇಲಾಖೆಯ ಮುಖ್ಯಸ್ಥರಿಗೆ ಸ್ಪಷ್ಟ ಮತ್ತು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ಇದ್ದಾಗಲೂ ಆದೇಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳಿಗೆ ದೌರ್ಜನ್ಯ, ಕಿರುಕುಳ ಮತ್ತು ಹಿಂಸೆ ನೀಡುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.

300x250 AD

ಸಭಾಧ್ಯಕ್ಷ ಕಾಗೋಡ ತಿಮ್ಮಪ್ಪ ಪ್ರಯತ್ನ:
 ಕರ್ನಾಟಕ ಸರಕಾರದ ವಿಧಾನ ಸಭೆಯ ಹಿಂದಿನ ಸಭಾಧ್ಯಕ್ಷರಾದ ಕಾಗೋಡ ತಿಮ್ಮಪ್ಪ ಅವರು ಅಧ್ಯಕ್ಷತೆಯಲ್ಲಿ ಜರುಗಿದ ವಿಧಾನ ಸಭೆಯ ಅಧಿವೇಶನದಲ್ಲಿ ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿ ವಿಶೇಷ ವಿಧಾನ ಮಂಡಳದಲ್ಲಿ ವಿಸ್ತೃತ ಚರ್ಚಿಸಿದ ನಂತರ ತೆಗೆದುಕೊಂಡ ತೀರ್ಮಾನದಂತೆ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬಾರದೆಂಬ ಕುರಿತು ಸರಕಾರದ ಪರವಾಗಿ ಸಚಿವ ಸಂಪುಟದ ಅನುಮೋಧನೆಗೆ ಮೇರೆಗೆ ಸರ್ಕಾರದ ಆದೇಶವನ್ನ ಅಪರ ಮುಖ್ಯ ಕಾರ್ಯದರ್ಶಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯು ಜೂನ್ 2016 ರಂದು ಸುತ್ತೋಲೆ ಹೊರಡಿಸಿರುವುದು ದಾಖಲಾರ್ಹ ಎಂದು ರವೀಂದ್ರ ನಾಯ್ಕ ತಿಳಿಸಿದರು.

Share This
300x250 AD
300x250 AD
300x250 AD
Back to top