Slide
Slide
Slide
previous arrow
next arrow

ಡಿ. 25ಕ್ಕೆ ಶಿರಸಿಯಲ್ಲಿ ‘ಅಹಿಚ್ಛತ್ರ’ ನಾಟಕ ಪ್ರದರ್ಶನ

300x250 AD

ಶಿರಸಿ: ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಉಪ್ಲೆ ಹೊನ್ನಾವರ ಹಾಗೂ ಜನಹಿತ ಸೇವಾ ಫೌಂಡೇಶನ್ ಸಹಯೋಗದಲ್ಲಿ ಡಿ.25ರಂದು ಸಂಜೆ 5ಗಂಟೆಗೆ ನಗರದ ಟಿ.ಆರ್.ಸಿ ಭವನದಲ್ಲಿ ‘ಅಹಿಚ್ಛತ್ರ’ ನಾಟಕವು ಪ್ರದರ್ಶನಗೊಳ್ಳಲಿದೆ.

ಬನವಾಸಿಯ ರಾಜಾ ಮಯೂರವರ್ಮನ ಆಸ್ಥಾನದ ಮೇರೆಗೆ ಆಗಮಿಸಿದ ಹವ್ಯಕರ ಮೂಲದ ಕುರಿತಾದ ನಾಟಕ ಇದಾಗಿದ್ದು ಸಾಮಾಜಿಕ ಐತಿಹಾಸಿಕ ಸನ್ನಿವೇಶಗಳ ಸಮ್ಮಿಲನವಾಗಿದೆ. ನಾಟಕವನ್ನು ಅಪರಂಜಿ ಕಡತೋಕಾ ರಚಿಸಿದ್ದು ಕೃಷ್ಣಾನಂದ ಭಟ್ ಉಪ್ಲೆ ಸಂಯೋಜನೆ ಹಾಗೂ ಸಂಚಿಕೆ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಹವ್ಯಕ ಹಿರಿಯ ಸಾಧಕರನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9611528880 ಸಂಪರ್ಕಿಸಬಹುದು ಹಾಗೂ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top