• Slide
    Slide
    Slide
    previous arrow
    next arrow
  • ರಾಜ್ಯ ಮಟ್ಟದ ಕವನ ಸಿರಿ ಸ್ಪರ್ಧೆ ವಿಜೇತೆ ಲಯನ್ಸ ಶಾಲೆಯ ಅನ್ಶಿಕಾ

    300x250 AD

    ಶಿರಸಿ: ಎಳೆಯರ ಸಾಹಿತ್ಯ ಪ್ರತಿಭೆಯನ್ನು ಗುರುತಿಸುವ ದಕ್ಷಿಣ ಕನ್ನಡದ ಮಕ್ಕಳ ಜಗಲಿ ವೇದಿಕೆಯ ಮೂಲಕ ನಡೆದ ರಾಜ್ಯಮಟ್ಟದ ಕವನ ಸಿರಿ ಕವನ ಸ್ಪರ್ಧೆಯಲ್ಲಿ, 5ರಿಂದ 8 ನೇ ತರಗತಿ ವಿಭಾಗದಲ್ಲಿ, ನಗರದ ಲಯನ್ಸ ಶಾಲೆಯ ಅನ್ಶಿಕಾ ಆಶ್ವತ್ಥ ಹೆಗಡೆ ಮೆಚ್ಚುಗೆಯ ಬಹುಮಾನ ಪಡೆದಿದ್ದಾಳೆ. ಅಪ್ಪನ ಕುರಿತು ಅನ್ಶಿಕಾ ಬರೆದ ಕವನ ನಿರ್ಣಾಯಕರ ಮೆಚ್ಚುಗೆಗೆ ಪಾತ್ರವಾಗಿದೆ.

    ವಿಜೇತ ವಿದ್ಯಾರ್ಥಿಯನ್ನು ಪಾಲಕರಾದ ಲಯನ್ ಆಶ್ವತ್ಥ ಹೆಗಡೆ ಹಾಗೂ ಲಯನ್ ಜ್ಯೋತಿ ಹೆಗಡೆ ದಂಪತಿಗಳನ್ನು ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಲಯನ್ಸ ಶಾಲಾ ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top