Slide
Slide
Slide
previous arrow
next arrow

ಭಗವದ್ಗೀತಾ ಅಭಿಯಾನದ ಭಾಷಣ ಸ್ಪರ್ಧೆ; ದಾಂಡೇಲಿಯ ಇಳಾ ರಾಜ್ಯಕ್ಕೆ ದ್ವಿತೀಯ

300x250 AD

ದಾಂಡೇಲಿ: ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇOದ್ರ ಸರಸ್ವತಿ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ ಸ್ವರ್ಣವಲ್ಲಿ ಮಠದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ನಿಮಿತ್ತ ಹಮ್ಮಿಕೊಂಡಿದ್ದ ಭಾಷಣಾ ಸ್ಪರ್ಧೆಯಲ್ಲಿ ಜನತಾ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಇಳಾ ಜಿ.ಹೆಗಡೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಭಗವದ್ಗೀತೆ ಮತ್ತು ಧರ್ಮ ಸಮನ್ವಯ ಎಂಬ ವಿಷಯದ ಬಗ್ಗೆ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಇಳಾ ಭಾಗವಹಿಸಿದ್ದಳು. ಈಕೆ ನಗರದ ಜೆವಿಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಜಿ.ಎಸ್.ಹೆಗಡೆ ಮತ್ತು ರೂಪಶ್ರೀ ಹೆಗಡೆ ದಂಪತಿ ಸುಪುತ್ರಿಯಾಗಿದ್ದಾಳೆ.
ಇಳಾ ಸಾಧನೆಗೆ ಜನತಾ ಸಂಯುಕ್ತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಕಿಶೋರ ಕಿಂದಳ್ಕರ್ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top