Slide
Slide
Slide
previous arrow
next arrow

ಹವ್ಯಾಸಿ ರಂಗಭೂಮಿ ಕಲಾವಿದ ತುಡುಗುಣಿ ವಿ.ಜಿ. ಭಟ್ ನಿಧನ

300x250 AD

ಶಿರಸಿ: ಹೆಸರಾಂತ ಹವ್ಯಾಸಿ ರಂಗಭೂಮಿ ಕಲಾವಿದ, ಕೃಷಿಕ ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ತುಡಗುಣಿಯ ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತುಡುಗುಣಿಯ ವಿ.ಜಿ. ಭಟ್ (60) ಬುಧವಾರ ನಿಧನರಾದರು.

ಗೋಳಿ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತುಡಗುಣಿ ಕೃಷ್ಣ ಎಂದೇ ಹೆಸರುವಾಸಿಯಾಗಿದ್ದರು. ಸದಾ ಸಮಾಜಮುಖಿ ವ್ಯಕ್ತಿತ್ವ ಹೊಂದಿರುವ ಇವರು ತುಡಗುಣಿ ಯುವಕ ಸಂಘದ ಹುಟ್ಟು ಬೆಳವಣಿಗೆಯಲ್ಲಿ ಹಿರಿ ಕಿರಿಯರೊಂದಿಗೆ ಹೆಗಲು ಕೊಟ್ಟವರು.ಅನೇಕ ವರ್ಷಗಳಿಂದ ಯಕ್ಷಗಾನ ತಾಳಮದ್ದಲೆಯನ್ನು ಹಿರಿಯರಂತೇ ಕುಟುಂಬಸ್ಥರೊಡಗೂಡಿ ನಿರಂತರವಾಗಿ ವಿಜಯದಶಮಿಯಂದು ಸಂಘಟಿಸಿಕೊಂಡು ಬಂದವರು. ತುಡುಗುಣಿ ಕುಟುಂಬದ ಅರುಂಧತಿ ಮತ್ತು ಗೋವಿಂದ ಮಾಬ್ಲೇಶ್ವರ ಭಟ್ಟರ ದ್ವಿತೀಯ ಪುತ್ರರಾಗಿದ್ದರು.

300x250 AD

 ಅವರು ಪತ್ನಿ ಪುತ್ರಿ ತಾಯಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ .

Share This
300x250 AD
300x250 AD
300x250 AD
Back to top